ಪ್ರಜಾಸ್ತ್ರ ಸುದ್ದಿ
ಚಿಕ್ಕಮಗಳೂರು: ಇದೊಂದು ವಿಚಿತ್ರ ಮದುವೆ. ರಾತ್ರಿ ರಿಸೆಪ್ಷನ್ ಮುಗಿಸಿ ವರ ನಾಪತ್ತೆಯಾಗಿದ್ದಾನೆ. ಬೆಳಗ್ಗೆ ಮದುವೆಗೆ ವರನನ್ನ ಹುಡುಕಿದ್ರೆ ಎಲ್ಲಿಯೂ ಇಲ್ಲ. ಇದ್ರಿಂದಾಗಿ ವಧುವಿನ ಕಡೆಯವರಿಗೆ ದೊಡ್ಡ ಟೆನ್ಷನ್. ಇಂತಹದೊಂದು ಘಟನೆ ನಡೆದಿದ್ದು ಚಿಕ್ಕಮಗಳೂರಿನ ತರಿಕೇರಿಯಲ್ಲಿ.
ದೋರನಾಳು ಗ್ರಾಮದ ನವೀನ ಹಾಗೂ ಅಶೋಕ ಸಹೋದರರ ಮದುವೆ ನಿಶ್ಚಿಯವಾಗಿದೆ. ಮದುವೆ ಹಿಂದಿನ ರಾತ್ರಿ ರಿಸೆಪ್ಷನ್ ನಡೆದಿದೆ. ಅಶೋಕ ಮದುವೆ ಸಮಸ್ಯೆಯಾಗಿಲ್ಲ. ಆದ್ರೆ, ವರ ನವೀನ ಎಸ್ಕೇಪ್ ಆಗಿದ್ದಾನೆ. ಕಾರಣ, ಇವನ ಮದುವೆ ವಿಷಯ ತಿಳಿದು ಕಲ್ಯಾಣ ಮಂಟಕ್ಕೆ ಲವರ್ ಬಂದಿದ್ದಾಳೆ. ನೀನು ಬೇರೆ ಮದುವೆಯಾದ್ರೆ ಕಲ್ಯಾಣ ಮಂಟಪದಲ್ಲಿಯೇ ವಿಷ ಕುಡಿಯುತ್ತೇನೆ ಎಂದು ಹೆದರಿಸಿದ್ದು, ಹೀಗಾಗಿ ನವೀನ ಅವಳೊಂದಿಗೆ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗ್ತಿದೆ.
ವರ ನವೀನ ಮಾಡಿದ ಕೆಲಸದಿಂದ ಸರಪನಹಳ್ಳಿಯ ವಧು ಸಿಂಧು ಅವರ ಕುಟುಂಬಸ್ಥರಲ್ಲಿ ಆತಂಕ. ಕುಟುಂಬುಸ್ಥರನ್ನ ಆತಂಕವನ್ನ ದೂರ ಮಾಡಿದ್ದು ದೋರನಾಳು ಗ್ರಾಮದ ಹತ್ತಿರದ ನಂದಿ ಗ್ರಾಮದ ಚಂದ್ರು ಎಂಬಾತ. ಬಿಎಂಟಿಸಿಯಲ್ಲಿ ಕಂಡಕ್ಟರ್ ಆಗಿರುವ ಚಂದ್ರು, ಸಿಂಧುಳನ್ನ ಮದುವೆಯಾಗುವುದಾಗಿ ಹೇಳಿ ತಾಳಿ ಕಟ್ಟಿದ್ದಾನೆ. ಹೀಗಾಗಿ ಎಲ್ಲರ ಆತಂಕ ದೂರವಾಗಿದೆ. ನಾಪತ್ತೆ ವರನ ಹುಡುಕಾಟ ನಡೆದಿದೆ.