ಪ್ರಜಾಸ್ತ್ರ ಸುದ್ದಿ
ಕುಣಿಗಲ್: ಇಲ್ಲಿನ ಮಾರ್ಕೋನಹಳ್ಳಿ ಕೋಡಿ ಹಳ್ಳದಲ್ಲಿ ನಾಲ್ವರು ಯುವಕರು ಕೊಚ್ಚಿಕೊಂಡು ಹೋಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಭಾನುವಾರ ಈ ಒಂದು ಘಟನೆ ನಡೆದಿದ್ದು, ಇನ್ನು ಶೋಧ ಕಾರ್ಯ ಮುಂದುವರೆದಿದೆ.
ಕೋಟೆ ಪ್ರದೇಶದ ಪರ್ವಿನ್ ರಾಜ್(23), ಸಾದೀಯ(17), ಎಡೆಯೂರು ಹೋಬಳಿ ಬೀರಗಾನಹಳ್ಳಿಯ ರಾಜು(23) ಹಾಗೂ ಅಪ್ಪು(20) ಅನ್ನೋ ಯುವಕರು ಕೊಚ್ಚಿಕೊಂಡು ಹೋಗಿದ್ದಾರೆ. ಕೋಡಿ ಹಳ್ಳ ತಂಬಿಕೊಂಡಿದ್ದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅದರಂತೆ ಭಾನುವಾರ ಸಂಜೆ ನೀರಿನಲ್ಲಿ ಆಟವಾಡುವಾಗ ಈ ಘಟನೆ ನಡೆದಿದೆ.
ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪತ್ತೆ ಕಾರ್ಯ ನಡೆಸಿದ್ದಾರೆ. ಇದೆ ವೇಳೆ 11 ವರ್ಷದ ಬಾಲಕನು ಕೊಚ್ಚಿಕೊಂಡು ಹೋಗುತ್ತಿದ್ದ, ಕುಟುಂಬಸ್ಥರು ತಕ್ಷಣ ಹಿಡಿದ ಪರಿಣಾಮ ಪಾರಾಗಿದ್ದಾನೆ.