ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ 2.0 2ನೇ ದಿನಕ್ಕೆ ಕಾಲಿಟ್ಟಿದೆ. ಭಾನುವಾರ ರಾಮನಗರದಿಂದ ಶುರು ಮಾಡಲಾಗಿದೆ. ಇಂದು ಬಿಡದಿಯಿಂದ ಕೆಂಗೇರಿವರೆಗೂ ಸಾವಿರಾರು ಕಾರ್ಯಕರ್ತರು ಕಾಲ್ನಡಿಗೆ ನಡೆಸಿದರು.
ಇದಕ್ಕೂ ಮೊದ್ಲು ಬಿಡದಿಯಲ್ಲಿ ಸಮಾವೇಶ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಯೋಜನೆಯಿಂದ 4 ಕೋಟಿ ಜನರಿಗೆ ಕುಡಿಯುವ ನೀರು, 400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತೆ. ಇದಕ್ಕೆ ಯಾರ ತಕರಾರೂ ಇಲ್ಲ. ಇರೋದೆಲ್ಲ ಬಿಜೆಪಿಯವರದ್ದೆ ಎಂದರು.