ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಲೋಕಸಭೆ ಕಲಾಪದಿಂದ ವಿಪಕ್ಷಗಳ ಸಂಸದರನ್ನು ಅಮಾನತು ಮಾಡಿದ ಸಂಬಂಧ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಟಿಸಿಎಂ ಸಂಸದ ಕಲ್ಯಾಣ್ ಬ್ಯಾನರ್ಜಿ, ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರ ಮಿಮಿಕ್ರಿ ಮಾಡಿದ್ದರು. ಇದನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿಡಿಯೋ ಮಾಡಿದ್ದರು. ಇದು ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಉಪ ರಾಷ್ಟ್ರಪತಿ, ಸಭಾಪತಿ ಸ್ಥಾನಕ್ಕೆ ಅಗೌರವ ತೋರಿಸಲಾಗಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಜಗದೀಪ್ ಧನಕರ್ ಅವರು ಸಹ ಬೇಸರ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ, ನಾನು 20 ವರ್ಷಗಳಿಂದ ಅವಮಾನ ಎದುರಿಸುತ್ತಿದ್ದೇನೆ ಎಂದರು. ಎಐಸಿಸಿ ಅಧ್ಯಕ್ಷ ಖರ್ಗೆ, ನಾನು ಅಮಮಾನುಗಳನ್ನು ಎದುರಿಸುತ್ತಲೇ ಬಂದಿದ್ದೇವೆ ಅಂತಾ ತಿರುಗೇಟು ನೀಡಿದರು.
ಈಗ 2017ರಲ್ಲಿ ಪ್ರಧಾನಿ ಮೋದಿ, ಮಾಜಿ ಉಪ ರಾಷ್ಟ್ರಪತಿ ಅಹ್ಮದ್ ಅನ್ಸಾರಿ ಅವರ ಕುರಿತು ಅಪಹಾಸ್ಯ ಮಾಡಿದ ವಿಡಿಯೋ ಹರಿಬಿಡಲಾಗಿದೆ. ವಿಪಕ್ಷಗಳ ನಾಯಕರನ್ನು ಸಂಸತ್ತಿನಲ್ಲಿ ಅಣುಕಿಸಿದ್ದ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಮೂಲಕ ಮಿಮಿಕ್ರಿ ವಾಗ್ದಾಳಿ ಎರಡೂ ಪಕ್ಷಗಳಿಂದ ಭರ್ಜರಿಯಾಗಿ ನಡೆಯುತ್ತಿದೆ.