ನವದೆಹಲಿ: ಸಚಿವ ಆನಂದ ಸಿಂಗ್ ವಿರುದ್ಧ ಇದೀಗ ಕಾಂಗ್ರೆಸ್ ಅಟ್ಯಾಕ್ ಮಾಡ್ತಿದೆ. ಸಚಿವ ಸ್ಥಾನದಿಂದ ಅವರನ್ನ ಕೈ ಬಿಡಬೇಕು. ಇಲ್ವೆ ಖಾತೆ ಬದಲಾವಣೆ ಮಾಡಬೇಕು ಎಂದು ಕಾಂಗ್ರೆಸ್ ಮಾಜಿ ಸಚಿವ ಹೆಚ್.ಕೆ ಪಾಟೀಲ ಹೇಳಿದ್ದಾರೆ. ಇಲ್ಲದೆ ಹೋದರೆ, ಅಧಿವೇಶನದಲ್ಲಿ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿಯಲ್ಲಿ ಮಾತ್ನಾಡಿರುವ ಹೆಚ್.ಕೆ ಪಾಟೀಲ, ಆನಂದ ಸಿಂಗ್ ಮೇಲೆ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಾಕಷ್ಟು ಆರೋಪಗಳಿವೆ. ಹೀಗಿರುವಾಗ ಅವರಿಗೆ ಅರಣ್ಯ ಖಾತೆ ಕೊಡುವುದು ಎಷ್ಟು ಸರಿ. ಆರ್ಟಿಕಲ್ 162, 163 ಪ್ರಕಾರ ರಾಜ್ಯಪಾಲರು ಅವರನ್ನ ಸಚಿವ ಸ್ಥಾನದಿಂದ ತೆಗೆದು ಹಾಕಬೇಕು ಎಂದು ಹೇಳಿದ್ದಾರೆ.
ಗವರ್ನರ್ ಅವರು ರೂಲ್ ಆಫ್ ಲಾ ಎತ್ತಿ ಹಿಡಿಯಬೇಕು. ಇದಾಗದೆ ಹೋದರೆ, ಅಧಿವೇಶನದಲ್ಲಿ ಅವರ ಭಾಷಣಕ್ಕೆ ಯಾವುದೇ ಮಹತ್ವ ಇರುವುದಿಲ್ಲ. ಹೀಗಾಗಿ ಈ ಬಗ್ಗೆ ಅವರು ಸೂಕ್ತ ಕ್ರಮವನ್ನ ತೆಗೆದುಕೊಳ್ಳಲಿಲ್ಲವೆಂದರೆ ಅವರ ವಿರುದ್ಧವೇ ಧರಣಿ ಮಾಡುವ ಎಚ್ಚರಿಕೆಯನ್ನ ಹೆಚ.ಕೆ ಪಾಟೀಲರನ್ನ ನೀಡಿದ್ದಾರೆ.