ಯಾವ ಪುರುಷಾರ್ಥಕ್ಕೆ ಇಂಥಾ ಮಾತು: ಸಚಿವ ಹೆಚ್.ಕೆ ಪಾಟೀಲ

184

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಬೀಳಿಸುವ ಹೇಳಿಕೆಯನ್ನು ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿಗೆ ಸಚಿವ ಹೆಚ್.ಕೆ ಪಾಟೀಲ ತಿರುಗೇಟು ನೀಡಿದ್ದಾರೆ. ಸೋಮವಾರ ನಗರದಲ್ಲಿ ಮಾತನಾಡಿದ ಅವರು, ಯಾವ ಪುರುಷಾರ್ಥಕ್ಕೆ ಸರ್ಕಾರ ಅಭದ್ರಗೊಳಿಸುವ ಮಾತುಗಳು. ಈ ಹಿಂದೆ 17 ಜನರನ್ನು ಮುಂಬೈ, ಗೋವಾಕ್ಕೆ ಕರೆದುಕೊಂಡು ಹೋದಂತೆ ಅಲ್ಲ ಎಂದಿದ್ದಾರೆ.

ರಾಜ್ಯದ ಅಭಿವೃದ್ಧಿಗೆ ಕೊಡಲಿ ಪೆಟ್ಟು ಕೊಡಬೇಕು ಎನ್ನುವುದು ಕುಮಾರಸ್ವಾಮಿ ಉದ್ದೇಶ. ಶಾಸಕರನ್ನು ಖರೀದಿಸುವ ವಸ್ತುಗಳನ್ನಾಗಿ ಮಾಡುವ ವಾತಾವರಣ ಸೃಷ್ಟಿಸುತ್ತಿದ್ದಾರೆ. ಮಾಧ್ಯಮಗಳ ಮೂಲಕ ಜನರ ಮನಸ್ಸನ್ನು ಕೆಡಿಸುವ ಕೆಲಸ ಮಾಡಲಾಗುತ್ತಿದೆ. ಇದು ಯಶಸ್ವಿಯಾಗುವುದಿಲ್ಲ ಅಂತಾ ಹೇಳಿದರು.




Leave a Reply

Your email address will not be published. Required fields are marked *

error: Content is protected !!