ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ್ಮೇಲೆ ಮೊದಲ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಹೀಗಾಗಿ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಹಣಕಾಸು ಖಾತೆಯೂ ಬೊಮ್ಮಾಯಿ ಬಳಿ ಇರುವುದರಿಂದ ಬಜೆಟ್ ನಿರೀಕ್ಷೆ ಹಚ್ಚಿದೆ.
ಕಳೆದ ಬಾರಿ 2.46 ಲಕ್ಷ ಕೋಟಿಯ ಬಜೆಟ್ ಮಂಡನೆಯಾಗಿದೆ. ಈ ಬಾರಿ 2.60 ಲಕ್ಷ ಕೋಟಿಯ ಬಜೆಟ್ ಮಂಡನೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಯಾವೆಲ್ಲ ಕ್ಷೇತ್ರಗಳಿಗೆ ಕೊಡುಗೆ ಕೊಡುತ್ತಾರೆ ಅನ್ನೋ ಪ್ರಶ್ನೆ ಮೂಡಿದೆ. ವಿದ್ಯುತ್, ಶಿಕ್ಷಣ, ಕೃಷಿ, ವೈದ್ಯಕೀಯ, ತಂತ್ರಜ್ಞಾನ ಕ್ಷೇತ್ರ, ವಾಣಿಜ್ಯ ಸೇರಿದಂತೆ ಸಾಕಷ್ಟು ಕ್ಷೇತ್ರಗಳ ಜನರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಜೊತೆಗೆ ಶಿಕ್ಷರು, ಕಾಲೇಜು ಉಪನ್ಯಾಸಕರು ವೇತನ ಹಾಗೂ ಸೇವಾ ಭದ್ರತೆಗಾಗಿ ನಡೆಸುತ್ತಿರುವ ಹೋರಾಟ, ವಿದ್ಯಾರ್ಥಿ ವೇತನ, ಮಾಸಿಕ ಪಿಂಚಣಿಗಳು, ಬೆಳೆ ಸಾಲ, ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗದವರಿಗೆ ನೀಡುವ ಸಬ್ಸಿಡಿ, ವಿವಿಧ ಸಮುದಾಯಗಳ ನಿಗಮ, ಮಂಡಳಿಗೆ ನೀಡುವ ಹಣಕಾಸಿನ ನೆರವು ಸೇರಿದಂತೆ ವಿವಿಧ ವೃತ್ತಿಯ ಜನರ ಬೇಡಿಕೆಗಳಿಗೆ ಸಿಎಂ ಬೊಮ್ಮಾಯಿಯವರು ತಮ್ಮ ಮೊದಲ ಬಜೆಟ್ ನಲ್ಲಿ ಹೇಗೆ ಅದನ್ನು ನಿಭಾಯಿಸುತ್ತಾರೆ ಅನ್ನೋದು ನಾಳೆ ತಿಳಿಯಲಿದೆ.