ಬೆಂಗಳೂರು: ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಇದೀಗ ಸಚಿವ ಸಂಪುಟದಿಂದ ಹೊರ ನಡೆಯುವ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಮಾಧ್ಯಮದವರೊಂದಿಗೆ ಮಾತ್ನಾಡಿದ ಸಚಿವ ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿಗೆ ಅನ್ಯಾಯವಾದ್ರೆ ರಾಜೀನಾಮೆ ಸಲ್ಲಿಸುತ್ತೇನೆ ಅಂತಾ ಹೇಳುವ ಮೂಲಕ ಬಿಎಸ್ವೈ ಸರ್ಕಾರಕ್ಕೆ ಟೆನ್ಷನ್ ನೀಡಿದ್ದಾರೆ.
ನನ್ನನ್ನು ಅರ್ಧದಲ್ಲಿ ಕೈಬಿಟ್ರು ಅಂತಾ ಹೇಳಿದ್ರೆ, ಸಚಿವ ಹಾಗೂ ಶಾಸಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸುತ್ತೇನೆ ಅಂತಾ ಜಾರಕಿಹೊಳಿ ಹೇಳುವ ಮೂಲಕ ಸಚಿವ ಸಂಪುಟದಿಂದ ಜಾರಿಕೊಳ್ಳುವ ಮಾತುಗಳನ್ನಾಡಿದ್ದಾರೆ. ಈ ಮೂಲಕ ಸಿಎಂ ಬಿ.ಎಸ್ ಯಡಿಯೂರಪ್ಪ ಮೇಲೆ ಒತ್ತಡ ಹೇರುವ ಮತ್ತೊಂದು ತಂತ್ರ ರೂಪಿಸಲಾಗ್ತಿದೆ.