ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ: ರಾಜ್ಯ ಸರ್ಕಾರದ ವಿರುದ್ಧ ಸ್ವಪಕ್ಷೀಯದವರಿಂದಲೇ ಗುದ್ದಾಟ ನಡೆಯುತ್ತಿದ್ದು, ಅವರ ಮುನಿಸನ್ನ ತಣಿಸಲು ಕೆಲವರನ್ನ ಕೈ ಬಿಡಲಾಗುತ್ತೆ ಎಂದು ಹೇಳಲಾಗ್ತಿದೆ. ಅದೇ ರೀತಿ ಬಿಎಸ್ವೈ ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವೆಯಾಗಿರುವ ಶಶಿಕಲಾ ಜೊಲ್ಲೆ ಅವರನ್ನ ಕೈ ಬಿಡಲಾಗುತ್ತೆ ಎಂದು ಹೇಳಲಾಗ್ತಿದೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತ್ನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ನನ್ನನ್ನು ಸಚಿವ ಸ್ಥಾನದಿಂದ ಕೈಬಿಡುವುದು ಊಹಾಪೋಹ ಅಷ್ಟೇ. ಬಹಳ ಕಷ್ಟಪಟ್ಟು ಪಾರ್ಟಿ ಸಂಘಟನೆ ಮಾಡಿ ಬೆಳೆದಿದ್ದೇನೆ. ಸಚಿವ ಸ್ಥಾನ ಕೈ ತಪ್ಪುತ್ತೇ ಎಂದು ನನಗೆ ಅನ್ಸೋದಿಲ್ಲ ಎಂದಿದ್ದಾರೆ.
ಪಕ್ಷದ ನಿರ್ಣಯಕ್ಕೆ ಬದ್ಧವಾಗಿ ಕೆಲಸ ಮಾಡ್ತೀನಿ. ಬಿಜೆಪಿ ಪಕ್ಷದಲ್ಲಿ ಬೇರೆಯವರು ಹೇಗೆ ಬೆಳೆದು ಬಂದಿದ್ದಾರೆ ನನಗೆ ಗೊತ್ತಿಲ್ಲ. ಬೇರೆಯವರ ಬಗ್ಗೆ ನೋ ಕಾಮೆಂಟ್ಸ್ ಎಂದ ಸಚಿವೆ ಜೊಲ್ಲೆ, ಬೆಳಗಾವಿ ಬಂಡಾಯ ಶಾಸಕರ ವಿಚಾರಕ್ಕೂ ನೋ ಕಾಮೆಂಟ್ಸ್ ಎಂದಿದ್ದಾರೆ. ಅಲ್ದೇ, ಒಂದು ಮನೆಯಲ್ಲಿ ಜಗಳ ಇರುತ್ತದೆ. ನಮ್ಮ ಮನೆಯಲ್ಲಿ ಜಗಳ ಮುಗಿಸಲಾಗುವುದು. ಅದನ್ನು ಹಿರಿಯರು, ಮುಖಂಡರು ಬಗೆಹರಿಸುತ್ತಾರೆ ಎಂದಿದ್ದಾರೆ.