ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಚಿವ ಶ್ರೀರಾಮುಲು ಪಿಎ ರಾಜಣ್ಣ ಎಂಬುವವರನ್ನ ಗುರುವಾರ ಸಂಜೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗುತ್ತಿಗೆದಾರರು ಸೇರಿದಂತೆ ಹಲವರಿಗೆ ಆಶ್ವಾಸನಗಳನ್ನ ನೀಡಿ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇದೀಗ ಸಿಸಿಬಿ ಪೊಲೀಸರು ಸಚಿವ ಶ್ರೀರಾಮುಲು ಪಿಎ ರಾಜಣ್ಣ ಅವರನ್ನ ಇದೀಗ ವಿಚಾರಣೆ ನಡೆಸುವ ಮೂಲಕ, ಹಲವಾರು ವಿಷಯಗಳು ತಿಳಿದುಕೊಳ್ಳುವ ಕೆಲಸ ಮಾಡಲಾಗ್ತಿದೆ. ಈತನ ಹಿಂದೆ ಯಾರೆಲ್ಲ ಇದ್ದಾರೆ, ಯಾರಿಗೆಲ್ಲ ಮೋಸ ಮಾಡಿದ್ದಾರೆ? ಎಷ್ಟರ ಮಟ್ಟಿಗೆ ಮೋಸ ಮಾಡಲಾಗಿದೆ ಅನ್ನೋದರ ತನಿಖೆ ನಡೆಸಲಾಗ್ತಿದೆ.