ಪ್ರಜಾಸ್ತ್ರ ಸುದ್ದಿ
ವಿಜಯಪುರ: ಮಹಾನಗರ ವ್ಯಾಪ್ತಿಯಲ್ಲಿ ಕೋವಿಡ್ 19 ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅದಕ್ಕಾಗಿ ನಗರ ಸ್ವಚ್ಚತೆಗೆ ಸರ್ಕಾರ ಮೊದಲ ಆದ್ಯತೆ ನೀಡಿದೆ. ಆದ್ರೇ, ವಿಜಯಪುರದಲ್ಲಿ ಮಾತ್ರ ವಿಭಿನ್ನವಾಗಿದೆ. ಎಲ್ಲೆಂದರಲ್ಲಿ ಕಸ, ನೈರ್ಮಲ್ಯದಿಂದ ಕೂಡಿದೆ.
ಐತಿಹಾಸಿಕ ವಿಜಯಪುರದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ನಗರ ಪ್ರದಕ್ಷಿಣೆ ಹಾಕಿದ್ರು. ಈ ವೇಳೆ ಬಹುತೇಕ ಕಡೆ ಸ್ವಚ್ಛತೆ ಇಲ್ಲದ ಕಾರಣಕ್ಕೆ ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿಗೆ ಸಚಿವರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ನೈರ್ಮಲ್ಯದಿಂದ ಕೂಡಿದ ಪಾರ್ಕ್ ಸ್ಚಚ್ಛಗೊಳಿಸಿ ಅದರ ಫೋಟೋವನ್ನ ವಾಟ್ಸಪ್ ಮಾಡುವಂತೆ ಆಯುಕ್ತ ಶೆಟ್ಟಿಯವರಿಗೆ, ಸಚಿವ ಬೈರತಿ ಬಸವರಾಜ ಹೇಳಿದ್ರು. ಆಗ ಅವರು ನಾಳೆ ಸ್ವಚ್ಚಗೊಳಿಸಿ ಫೋಟೋ ಕಳಿಸುವೆ ಅಂದಿದ್ದಕ್ಕೆ, ಸಧ್ಯ ಕ್ಲೀನ್ ಮಾಡಿದ ಫೋಟೋ ಬೇಕೆಂದು ವಾರ್ನ್ ಮಾಡಿದ್ದಾರೆ. ಈ ಮೂಲಕ ನಗರ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಿಯೆಂದು ಸೂಚಿಸಿದ್ದಾರೆ.