ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ತಾಂಬಾ ಗ್ರಾಮದ ದೊಡ್ಡ ಹಳ್ಳದ 5 ಬ್ಯಾರೇಜ್ ಗಳಿಗೆ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಮುಖಾಂತರ ನೀರು ತುಂಬಿಸುವ ಸಂಬಂಧ, ಶಾಸಕ ಎಂ.ಸಿ ಮನಗೂಳಿ ಅವರು ಸಿಎಂಗೆ ಪತ್ರ ಬರೆದಿದ್ದಾರೆ.
ಬೆನಕನಹಳ್ಳಿ, ಶಿವಪೂರ, ತಾಂಬಾ, ತಾಂಬಾ ಎಲ್.ಟಿ, ಬನ್ನಿಹಟ್ಟಿ, ಗೊರನಾಳ ಈ 5 ಗ್ರಾಮಗಳಲ್ಲಿ ಒಂದೊಂದು ಬ್ಯಾರೇಜ್ ನಿರ್ಮಿಸಲಾಗಿದೆ. ಆದ್ರೆ, ಭೀಕರ ಬರಗಾಲದಿಂದ ಜನರು ನೀರಿಗಾಗಿ ಸಾಕಷ್ಟು ತೊಂದ್ರೆ ಅನುಭವಿಸ್ತಿದ್ದಾರೆ. ಹೀಗಾಗಿ ತಾಂಬಾ ಗ್ರಾಮದ ದೊಡ್ಡ ಹಳ್ಳದ 5 ಬ್ಯಾರೇಜ್ ಗಳಿಗೆ ನೀರು ತುಂಬಿಸುವ ಸಂಬಂಧ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಸಿಎಂ ಬಿ.ಎಸ್ ಯಡಿಯೂರಪ್ಪ, ಕೃಷ್ಣ ಭಾಗ್ಯ ಜಲನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಕರು ಬೆಂಗಳೂರು, ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬೆಂಗಳೂರು ಹಾಗೂ ಅಧೀಕ್ಷಕ ಇಂಜಿನೀಯರ್ ರಾಂಪೂರ ಇವರಿಗೆ ಪತ್ರ ಬರೆಯುವ ಮೂಲಕ ಶಾಸಕ ಎಂ.ಸಿ ಮನಗೂಳಿ ಮನವಿ ಮಾಡಿಕೊಂಡಿದ್ದಾರೆ.