ಬಿಎಸ್ಪಿ ಉಚ್ಛಾಟಿತ ಶಾಸಕ ಎನ್.ಮಹೇಶ ಬಿಜೆಪಿ ಸೇರ್ಪಡೆ

455

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬಿಎಸ್ಪಿ ಉಚ್ಛಾಟಿತ ಕೊಳ್ಳೇಗಾಲದ ಶಾಸಕ ಎನ್.ಮಹೇಶ ಗುರುವಾರ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪನವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ರು.

ಈ ವೇಳೆ ಮಾತ್ನಾಡಿದ ಸಿಎಂ ಬೊಮ್ಮಾಯಿ, ಚಳವಳಿಯ ಮೂಲಕ ರಾಜಕೀಯಕ್ಕೆ ಬಂದ ಎನ್.ಮಹೇಶ ಕೊಳ್ಳೇಗಾಲ ಭಾಗದ ಎಲ್ಲ ಜನರ ಮನಸ್ಸು ಗೆದ್ದಿದ್ದಾರೆ. ಎಲ್ಲರ ವೋಟ್ ಪಡೆದು ಶಾಸಕರಾಗಿದ್ದಾರೆ. ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿಕೊಂಡು ಬಂದಿದ್ದಾರೆ. ಅವರನ್ನ ಸೇವೆ ಪಕ್ಷ ಬಳಸಿಕೊಳ್ಳಲಿದೆ ಎಂದರು.

ಎನ್.ಮಹೇಶ ಸೇರ್ಪಡೆಯಿಂದ ಆನೆ ಬಲ ಬಂದಂತಾಗಿದೆ. ರಾಜ್ಯ ಸುತ್ತಿ ಪಕ್ಷವನ್ನ ಕಟ್ಟುತ್ತೇವೆ. ಪಕ್ಷ ದಲಿತರ ಹಿಂದೆ ಇದೆ ಅನ್ನೋ ಸಂದೇಶ ಹೋಗಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!