ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಗುರುವಾರ ಸದನದಲ್ಲಿ ಮಾಜಿ ಸ್ಪೀಕರ್, ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಹೇಳಿದ ಆಕ್ಷೇಪರ್ಹ ಮಾತಿಗೆ ಇಂದು ಕ್ಷಮೆ ಕೇಳಿದ್ದಾರೆ. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅನುಮತಿ ಪಡೆದು ಮಾತನಾಡಿದ ಅವರು, ಇಂಗ್ಲೀಷ್ ಭಾಷೆಯಲ್ಲಿರುವ ಒಂದು ಮಾತನ್ನು ಉಲ್ಲೇಖ ಮಾಡಿದಷ್ಟೆ. ಹೆಣ್ಣಿಗೆ ಅಪಮಾನ ಮಾಡುವುದು ಅಥವ ಲಘುವಾಗಿ ವರ್ತಿಸಬೇಕು ಅನ್ನೋ ಯಾವ ದುರುದ್ದೇಶವೂ ಇರಲಿಲ್ಲ ಎಂದರು.
ಸದನದ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ನಾನು ಇಲ್ಲಿ ಉಲ್ಲೇಖ ಮಾಡಿರುವ ಮಾತಿಗೆ, ಸಮಾಜದಲ್ಲಿ ಯಾರಿಗಾದರೂ ನೋವಾಗಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುವುದಕ್ಕೆ ಯಾವ ಮುಜುಗರವೂ ಇಲ್ಲ. ನನ್ನಿಂದ ಅಪರಾಧ ಆಗಿದೆ ಎಂದು ಈಗಾಗ್ಲೇ ತೀರ್ಮಾನಕ್ಕೆ ಬಂದು ತೀರ್ಪು ಕೊಟ್ಟುಬಿಟ್ಟಿದ್ದರಿಂದ ಕ್ಷಮೆ ಕೇಳುತ್ತೇನೆ ಎಂದರು. ಇದನ್ನು ಇಲ್ಲಿಗೆ ಬಿಟ್ಟು ಸದನವನ್ನು ಸುಗಮವಾಗಿ ನಡೆಸಿಕೊಂಡು ಹೋಗೋಣ ಎಂದರು.