ಸಿದ್ದು ಮೇಲೆ ಬಾಂಬ್ ಎಸೆದ ಹೆಬ್ಬಾರ

332

ಯಲ್ಲಾಪುರ: ಅತೃಪ್ತರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಹೊಸ ಬಾಂಬ್ ಸಿಡಿಸಿದ್ದಾರೆ. ಅದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಹೆಬ್ಬಾರ ಬಾಂಬ್ ಎಸದಿದ್ದಾರೆ. ಸಿದ್ದರಾಮಯ್ಯನವರ ಸೂಚನೆಯಂತೆ ನಾವೆಲ್ಲ ದೂರ ಉಳಿದಿದ್ದು ಅಂತಾ ಹೇಳಿದ್ದಾರೆ.

ನಾವು ಯಾವುದೇ ಹಣಕ್ಕೆ ಬಲಿಯಾಗಿಲ್ಲ. ನಮಗೆ ನೋವಾಗಿದೆ. ಹೀಗಾಗಿ ನಾವು ರಾಜೀನಾಮೆ ನೀಡಿದ್ದೇವೆ. ಇದ್ರಿಂದ ಹಿಂದೆ ಸರಿಯುವ ಮಾತೇ ಇಲ್ಲ ಅಂತಾ ಶಾಸಕ ಶಿವರಾಮ ಹೆಬ್ಬಾರ ಹೇಳಿದ್ದಾರೆ. ಈಗ್ಲೂ ನಮ್ಮ ನಾಯಕ ಸಿದ್ದರಾಮಯ್ಯನವರು. ನಾವು ನಮ್ಮ ನಾಯಕರ ಮಾತಿನಂತೆ ನಡೆದುಕೊಂಡಿದ್ದೇವೆ ಅಂತಾ ಹೇಳಿದ್ದಾರೆ.

ಇನ್ನು ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ, ಅನರ್ಹತೆ ಏನು ಅನ್ನೋದು ಯಾವುದು ಗೊತ್ತಾಗಿಲ್ಲ. ಸ್ಪೀಕರ್ ಅವರಿಗೆ ಈ ವಿಚಾರದಲ್ಲಿ ಸಂಪೂರ್ಣ ಅಧಿಕಾರಿವಿದೆ. ಇದರಲ್ಲಿ ನಾವು ಬರುವುದಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಅತೃಪ್ತರ ವಿಚಾರದಲ್ಲಿ ಸ್ಪೀಕರ್ ಯಾವ ನಿರ್ಧಾರ ತೆಗೆದುಕೊಳ್ತಾರೆ ಅನ್ನೋದರ ಮೇಲೆ ಹೊಸ ಸರ್ಕಾರದ ಭವಿಷ್ಯವಿದೆ ಅನ್ನೋದು ಸಹ ಮರೆಯುವಂತಿಲ್ಲ.




Leave a Reply

Your email address will not be published. Required fields are marked *

error: Content is protected !!