ನವದೆಹಲಿ: ನಾವು ನಿಮ್ಮನ್ನು ಗೌರವಿಸುವುದು ಬ್ರಾಹ್ಮಣ ಅನ್ನೋ ಕಾರಣಕ್ಕೆ ಅಲ್ಲ ಬಿರ್ಲಾ ಜೀ. ನೀವು ನಮ್ಮ ಲೋಕಸಭೆಯ ಸ್ಪೀಕರ್ ಅನ್ನೋ ಕಾರಣಕ್ಕೆ ಗೌರವ ಕೊಡುತ್ತೇವೆ ಎಂದು ಕಾಂಗ್ರೆಸ್ ನಾಯಕ ಕಪಿಲ ಸಿಬಲ್ ಹೇಳಿದ್ದಾರೆ. ಬ್ರಾಹ್ಮಣರು ಹುಟ್ಟಿನಿಂದಲೇ ಉನ್ನತ ಸ್ಥಾನ ಪಡೆಯುತ್ತಾರೆ ಎಂದು ಓಂ ಬಿರ್ಲಾ ಹೇಳಿದ್ರು.
ಟ್ವೀಟರ್ ಮೂಲಕ ಸ್ಪೀಕರ್ ಓಂ ಬಿರ್ಲಾ ಅವರ ಹೇಳಿಕೆಗೆ ಕಪಿಲ ಸಿಬಲ್ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ರಾಜಸ್ಥಾನದ ಕೋಟಾದಲ್ಲಿ ಅಖಿಲ ಬ್ರಾಹ್ಮಣ ಮಹಾಸಭಾದ ಸಭೆಯಲ್ಲಿ ಭಾಗವಹಿಸಿ ಈ ರೀತಿ ಹೇಳಿದ್ರು. ತ್ಯಾಗ ಹಾಗೂ ಪರಿಶ್ರಮದಿಂದ ಬ್ರಾಹ್ಮಣರಿಗೆ ಈ ಸ್ಥಾನ ಸಿಕ್ಕಿದೆ ಎಂದು ಹೇಳಿದ್ರು. ಬಿರ್ಲಾ ಅವರ ಹೇಳಿಕೆಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ರು. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ರು.