ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕಾಲುವೆ ತಡೆಗೋಡೆಗೆ ಗುಂಡಿ ತೋಡುತ್ತಿದ್ದಾಗ ಮಣ್ಣು ಕುಸಿದು ಬಿದ್ದ ಪರಿಣಾಮ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ. ಬಂಗಾಳ ಮೂಲದ ಚಂಚಲ್ ಬರ್ಮನ್(21) ಮೃತ ದುರ್ದೈವಿಯಾಗಿದ್ದಾನೆ.
ವೃಷಭಾವತಿ ಕಾಲುಗೆ ತಡೆಗೋಡೆ ನಿರ್ಮಿಸಲು ಗುಂಡಿ ತೆಗೆಯುವ ಕೆಲಸ ಮಾಡ್ತಿದ್ದಾಗ ಈ ಅನಾಹುತ ಸಂಭವಿಸಿದೆ. ಮಣ್ಣು ಮೈಮೇಲೆ ಬಿದ್ದಿದ್ರಿಂದ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಕಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.