ಪ್ರಜಾಸ್ತ್ರ ಸುದ್ದಿ
ಅಹಮದಾಬಾದ್: ಸರ್ದಾರ್ ವಲ್ಲಭಾಯ್ ಪಟೇಲ್ ಸ್ಟೇಡಿಯಂನ್ನ ನರೇಂದ್ರ ಮೋದಿ ಎಂದು ಮರುನಾಮಕರಣ ಮಾಡಲಾಗಿದೆ. ಇದನ್ನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಬುಧವಾರ ಉದ್ಘಾಟನೆ ಮಾಡಿದ್ದಾರೆ. ಅದು ವಿವಾದ ಜೊತೆಗೆ ಇದೀಗ ಹೊಸದೊಂದು ವಿವಾದ ಎದ್ದಿದೆ.
ಮೋದಿ ಹೆಸರು ಬಂತು ಅಂದ್ರೆ ಅಲ್ಲಿ ಅದಾನಿ, ಅಂಬಾನಿ ಹೆಸರು ಬಂದು ಬಿಡುತ್ತೆ. ಕಾಂಗ್ರೆಸ್ ಯುವ ನಾಯಕ ರಾಹುಲ ಗಾಂಧಿ, ನಾವಿಬ್ಬರು ನಮಗಿಬ್ಬರು ಎಂದು ಲೇವಡಿ ಮಾಡುತ್ತಲೇ ಇರ್ತಾರೆ. ಅದಕ್ಕೆ ಈಗ ಕ್ರೀಡಾಂಗಣ ವಿಷಯ ಸೇರಿದೆ. ಸರ್ದಾರ್ ವಲ್ಲಭಾಯ್ ಪಟೇಲ್ ಸ್ಟೇಡಿಯಂ ಹೆಸರು ಬದಲಾಯಿಸಿದ್ದಕ್ಕೆ ವಿರೋಧ ವ್ಯಕ್ತವಾಗಿದೆ. ಇದರ ನಡುವೆ ಅದಾನಿ, ರಿಲಾಯನ್ಸ್ ಪೆವಿಲಿಯನ್ ಹೆಸರು ಇಟ್ಟಿರುವುದು ರಾಜಕೀಯ ತಿರುವು ಪಡೆದುಕೊಂಡಿದೆ.
ಈ ಬಗ್ಗೆ ರಾಹುಲ ಗಾಂಧಿ, ಸುಪ್ರೀಂ ಕೋರ್ಟ್ ಹಿರಿಯ ವಕೀಲ, ಸಾಮಾಜೀಕ ಹೋರಾಟಗಾರ ಪ್ರಶಾಂತ ಭೂಷಣ, ಆಪ್ ಕರ್ನಾಟಕ ಟ್ವೀಟರ್ ನಲ್ಲಿ ವಾಗ್ದಾಳಿ ನಡೆಸಿವೆ. ನರೇಂದ್ರ ಮೋದಿ ಸ್ಟೇಡಿಯಂ, ಅದಾನಿ, ರಿಲಾಯನ್ಸ್ ಪೆವಿಲಿಯನ್, ಅಮಿತ ಶಾ ಪುತ್ರ ಜೈ ಶಾ ಕ್ರೀಡಾಂಗಣದ ಆಡಳಿತಗಾರ. ನಾವಿಬ್ಬರು. ನಮಗಿಬ್ಬರು ಎಂದು ರಾಹುಲ ಗಾಂಧಿ ವ್ಯಂಗ್ಯ ಮಾಡಿದ್ದಾರೆ.