ಪ್ರಜಾಸ್ತ್ರ ಸುದ್ದಿ
ನವದೆಹಲಿ: ಉದ್ಯಮಿ ಗೌತಮ್ ಅದಾನಿಯ ಕುರಿತು ಅಂತಾರಾಷ್ಟ್ರೀಯ ಮಟ್ಟದ ತನಿಖಾ ಸಂಸ್ಥೆ ಈಗಾಗ್ಲೇ ವರದಿ ಬಿಡುಗಡೆ ಮಾಡಿದೆ. ಇದು ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಮಂಗಳವಾರ ಸಂಸದ ರಾಹುಲ್ ಗಾಂಧಿ, ಸಂತ್ತಿನಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದ್ದು, 2014ಕ್ಕೂ ಮೊದಲು 609ನೇ ಸ್ಥಾನದಲ್ಲಿ ಅದಾನಿ 2ನೇ ಸ್ಥಾನಕ್ಕೆ ಬಂದಿದ್ದು ಹೇಗೆ ಎಂದಿದ್ದಾರೆ.
ಮೋದಿ ದೆಹಲಿಗೆ ಬಂದ ಮೇಲೆ ಇದೆಲ್ಲ ಬೆಳವಣಿಗೆ ನಡೆದಿದೆ. ಅವರು ರಾಜಕೀಯವಾಗಿ ಬೆಳೆಯಲು ಅದಾನಿ ಕೂಡಾ ಕಾರಣ. ದೇಶದ ಯಾವುದೇ ಭಾಗಕ್ಕೆ ಹೋದರೂ ಅದಾನಿ ಸಾಮ್ರಾಜ್ಯವಾಗಿದೆ. ವಿಮಾನ ನಿಲ್ದಾಣ, ಬಂದರೂ ಸೇರಿ ಎಲ್ಲವನ್ನೂ ಅದಾನಿ ಅವರಿಗೆ ದಾರಿ ಎರೆದು ಕೊಡಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಮೌನವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಎಲ್ಐಸಿ, ಬ್ಯಾಂಕ್ ಸೇರಿದಂತೆ ಸಾರ್ವಜನಿಕ ಸೇವಾ ಸಂಸ್ಥೆಗಳನ್ನು ದಿವಾಳಿ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದ್ದು ಪ್ರಧಾನಿ ಮೋದಿಗೆ ನಾಲ್ಕು ಪ್ರಶ್ನೆಗಳನ್ನು ಕೇಳಿದ್ದಾರೆ. ಎಷ್ಟು ಬಾರಿ ಅದಾನಿ ಜೊತೆಗೆ ಅಬ್ರಾಡ್ ಗೆ ಹೋಗಿದ್ದೀರಿ? ಎಷ್ಟು ಬಾರಿ ನಿಮ್ಮ ಪ್ರವಾಸದ ವೇಳೆ ಅದಾನಿ ನಿಮ್ಮೆ ಜೊತೆಯಾಗಿದ್ದಾರೆ? ನಿಮ್ಮ ವಿದೇಶ ಹೋದ ತಕ್ಷಣ ಅದಾನಿ ದೇಶ ಬಿಟ್ಟು ಹೋಗಿ ನಿಮ್ಮನ್ನು ಸಂಪರ್ಕಿಸಿದ್ದಾರೆ? ಚುನಾವಣೆಯ ಬಾಂಡ್ ನಲ್ಲಿ ಬಿಜೆಪಿಗೆ ಅದಾನಿ ಎಷ್ಟು ಹಣ ಕೊಟ್ಟಿದ್ದಾರೆ? ಹೀಗೆ ನಾಲ್ಕು ಪ್ರಶ್ನೆಗಳನ್ನು ರಾಹುಲ್ ಗಾಂಧಿ ಕೇಳಿದ್ದಾರೆ.