ಭಯೋತ್ಪಾದನೆ ಬೇರು ಪಾಕಿಸ್ತಾನದಲ್ಲಿದೆ: ಮೋದಿ

364

ಉತ್ತರಪ್ರದೇಶ: ಭಯೋತ್ಪಾದನೆ ಅನ್ನೋದು ಯಾವುದೋ ಒಂದು ದೇಶವನ್ನ ಕಾಡುತ್ತಿಲ್ಲ. ಇದು ಇಡೀ ವಿಶ್ವವನ್ನು ಕಾಡುತ್ತಿದೆ. ಇದರ ಬೇರು ನೆರೆಯ ದೇಶವಾದ ಪಾಕಿಸ್ತಾನದಲ್ಲಿದೆ ಅನ್ನೋದು ಆತಂಕದ ವಿಚಾರ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿಂದು ನಡೆದ ‘ಸ್ವಚ್ಛತಾ ಹಿ ಸೇವಾ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, 9/11ರ ಅಮೆರಿಕಾದ ಅವಳಿ ಕಟ್ಟಡಗಳ ಧ್ವಂಸದ ಕುರಿತು ಮಾತ್ನಾಡ್ತಾ, ಪಾಕಿಸ್ತಾನದ ಮೇಲೆ ನೇರವಾಗಿ ವಾಗ್ದಾಳಿ ನಡೆಸಿದ್ರು. ಭಯೋತ್ಪಾದನೆ ಇಡೀ ವಿಶ್ವಕ್ಕೆ ವ್ಯಾಪಿಸಿದೆ. ಇದಕ್ಕೆ ಕುಮ್ಮಕ್ಕು ನೀಡ್ತಿರುವವರು ಪಾಕಿಸ್ತಾನದಲ್ಲಿ ಅಭಿವೃದ್ಧಿ ಕಾಣ್ತಿದ್ದಾರೆ ಅಂತಾ ಟೀಕಿಸಿದ್ರು.

ಭಯೋತ್ಪಾದನೆ ವಿರುದ್ಧ ಭಾರತ ಏಕಾಂಗಿಯಾಗಿ ಹೋರಾಡುವ ತಾಕತ್ತು ಹೊಂದಿದೆ. ಇದಕ್ಕಾಗಿ ಪ್ರಮುಖ ನಿರ್ಧಾರಗಳನ್ನ ತೆಗೆದುಕೊಳ್ಳಲಾಗುತ್ತೆ. ಭಯೋತ್ಪಾದನೆಗೆ ಸಹಕಾರ ಮತ್ತು ತರಬೇತಿ ಯಾರು ನೀಡ್ತಾರೋ ಅಂತವರ ವಿರುದ್ಧ ಇಡೀ ವಿಶ್ವ ಹೋರಾಡಬೇಕಿದೆ ಅಂತಾ ಪ್ರಧಾನಿ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!