ಮೈಸೂರು: ಶಾಸಕ ತನ್ವೀರ್ ಸೇಠ್ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಪೊಲೀಸ್ರು ಸಾಕಷ್ಟು ಮಾಹಿತಿಯನ್ನ ಕಲೆ ಹಾಕಿದ್ದಾರೆ. ಶಾಸಕರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಫರ್ಹಾನ್ ಕೆಲ ಸ್ಫೋಟಕ ಮಾಹಿತಿಯನ್ನ ಹೊರ ಹಾಕಿದ್ದಾನೆ. ಹೆಲ್ಲೆಗೂ ಮೊದ್ಲು 30 ಮಂದಿ ಜೊತೆ ಫೋನ್ ನಲ್ಲಿ ಮಾತ್ನಾಡಿದ್ದು, ಅವರನ್ನ ಕರೆದು ವಿಚಾರಣೆ ಮಾಡಲಾಗ್ತಿದೆ.
ಹಿಂದೂ ಮುಖಂಡ ರಾಜು ಹತ್ಯೆಯ ಆರೋಪಿಯಾಗಿರುವ ಅಬೀದ ಪಾಷಾ ಈ ಘಟನೆ ಹಿಂದಿನ ಮಾಸ್ಟರ್ ಮೈಂಡ್ ಅನ್ನೋ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಪೊಲೀಸ್ರು ಅಬೀದ ಪಾಷಾನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ‘ಪಿಎಫ್ಐ’ನ 30 ಟೀಂಗಳು ಕೆಲಸ ಮಾಡ್ತಿವೆ ಅನ್ನೋ ವಿಚಾರ ಗೊತ್ತಾಗಿದೆ. ಒಂದು ತಂಡದಲ್ಲಿ 15 ಜನರಿದ್ದು, ಧರ್ಮಗುರುಗಳು, ರಾಜಕಾರಣಿಗಳು, ಗಣ್ಯ ವ್ಯಕ್ತಿಗಳು ಇವರ ಟಾರ್ಗೆಟ್ ಆಗಿದ್ದಾರೆ. ಹಿಂದೂ ಮುಖಂಡ ರಾಜು ಕೊಲೆ ಆರೋಪಿ ಅಬೀದ ಪಾಷಾ ಜಾಮೀನಿನ ಮೇಲೆ ಹೊರ ಬಂದಿದ್ದ. ಇದೀಗ ತನ್ವೀರ್ ಸೇಠ್ ಹಲ್ಲೆಗೆ ಸಂಬಂಧಿಸಿದಂತೆ ಅಬೀದ ಪಾಷಾ ಸೇರಿದಂತೆ 6 ಜನರನ್ನ ಬಂಧಿಸಲಾಗಿದೆ.
ತನ್ವೀರ್ ಸೇಠ್ ಹತ್ಯೆಗೆ ಅಬೀದ ಪಾಷಾ ಎರಡ್ಮೂರು ಬಾರಿ ಪ್ರಯತ್ನಿಸಿದ್ದಾನೆ. ಮುಸ್ಲಿಂರು ಹೆಚ್ಚಿರುವ ಜಾಗದಲ್ಲಿಯೇ ಯತ್ನಿಸಿ ವಿಫಲನಾಗಿದ್ದ. ಬಳಿಕ ಫರ್ಹಾನಗೆ ಇದರ ತರಬೇತಿ ನೀಡಿದ್ದ. ಅಬೀದ ಜೊತೆ ಅಕ್ರಂ, ಮುಜೀಬ, ನೂರ ಖಾನ್ ಹಾಗೂ ಮುಜಾಮಿಲ್ ಶಾಮೀಲಾಗಿದ್ದಾರೆ ಅಂತಾ ವಿಚಾರಣೆ ವೇಳೆ ತಿಳಿದು ಬಂದಿದೆ.