ಇನ್ಮುಂದೆ ಸರ್ಕಾರದ ಪ್ರಸ್ತಾವನೆ, ಪತ್ರಗಳು ಕನ್ನಡದಲ್ಲಿ

1918

ಬೆಂಗಳೂರು: ಇನ್ಮುಂದೆ ರಾಜ್ಯ ಸರ್ಕಾರದ ಪ್ರತಿಯೊಂದು ಪ್ರಸ್ತಾವನೆ, ಪತ್ರಗಳು ಕನ್ನಡದಲ್ಲಿಯೇ ಇರಬೇಕು ಎಂದು ಖಡಕ್ ಆದೇಶ ಹೊರಡಿಸಿದೆ. ಈ ಬಗ್ಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಟಿ.ಎಸ್ ನಾಗಾಭರಣ ಅವರು, ನವೆಂಬರ್ 7ರಂದು ಸರ್ಕಾರಕ್ಕೆ ಪತ್ರ ಬರೆದಿದ್ರು. ಸರ್ಕಾರದ ಎಲ್ಲ ವ್ಯವಹಾರಗಳನ್ನ ಕನ್ನಡದಲ್ಲಿಯೇ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲು ಪತ್ರ ಬರೆದಿದ್ರು. ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿರುವ ಸರ್ಕಾರ, ಇನ್ಮುಂದೆ ಸರ್ಕಾರದ ಪ್ರತಿಯೊಂದು ಪ್ರಸ್ತಾವನೆ ಪತ್ರಗಳನ್ನ ಕನ್ನಡದಲ್ಲಿಯೇ ನೀಡುವಂತೆ ಸೂಚಿಸಿದೆ.

ರಾಜ್ಯ ಸರ್ಕಾರದ ಎಲ್ಲ ವ್ಯವಹಾರಗಳನ್ನ ಕನ್ನಡದಲ್ಲಿಯೇ ನಡೆಸಬೇಕೆಂದು ಈ ಹಿಂದೆಯೇ ಸರ್ಕಾರ ಸೂಚಿಸಿತ್ತು. ಹೈಕೋರ್ಟ್ ಸಹ ಕನ್ನಡದಲ್ಲಿಯೇ ನಡೆಸುವುದಾಗಿ ಘೋಷಿಸಿತ್ತು. ಆದ್ರೆ, ಸರ್ಕಾರಿ ಅಧಿಕಾರಿಗಳು ಅದರ ಬಗ್ಗೆ ತಲೆ ಕೆಡಿಸಿಕೊಂಡಿರ್ಲಿಲ್ಲ. ಇದೀಗ ಖಡಕ್ ಆದೇಶ ಹೊರಡಿಸಲಾಗಿದೆ. ಮುಂದೇನಾಗುತ್ತೆ ನೋಡಬೇಕು.




Leave a Reply

Your email address will not be published. Required fields are marked *

error: Content is protected !!