ಪ್ರಜಾಸ್ತ್ರ ಸುದ್ದಿ
ಇಂಡಿ: ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ವಿರುದ್ಧ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಭರ್ಜರಿ ವಾಗ್ದಾಳಿ ನಡೆಸಿದ್ದಾರೆ. ಶಾಸಕ ಯಶವಂತರಾಯಗೌಡ ಅವರಪ್ಪನಿಗೆ ಹುಟ್ಟಿದ್ದರೆ ಮುಂದಿನ ಸಾರಿ ಚುನಾವಣೆಗೆ ನಿಲ್ಲಬಾರದು ಎಂದು ಶಿವಯೋಗಪ್ಪ ನೇದಲಗಿ ಸವಾಲ್ ಹಾಕಿದ್ದಾರೆ.
ಮಾನವೀಯತೆ ಇದ್ದರೆ, ಅಪ್ಪಗ ಹುಟ್ಟಿದ್ರೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕ ರಾಜೀನಾಮೆ ಕೊಡಬೇಕು ಅಂದಿದ್ರು. ನಾನು ಮಾತು ಕೊಟ್ಟಂತೇ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ನಾನು ಅಪ್ಪಗ ಹುಟ್ಟೇನಿ ಅದಕ್ಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡೀನಿ. ಅವರು ಅಪ್ಪಗ ಹುಟ್ಟಿದ್ರೆ ಮುಂದಿನ ಸಾರಿ ಚುನಾವಣೆಗೆ ನಿಲ್ಲಬಾರದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ವಿರುದ್ಧ ಶಿವಯೋಗಪ್ಪ ನೇದಲಗಿ ಸವಾಲ್ ಕಿಡಿ ಕಾರಿದ್ದಾರೆ.