ಬೆಂಗಳೂರು: ಇಡಿ ಕೊಟ್ಟಿರುವ ನೋಟಿಸ್ ಗೆ ಸಂಬಂಧಿಸಿದಂತೆ ನಾನು ಬುಧವಾರ ದೆಹಲಿಗೆ ಹೋಗುತ್ತೇನೆ ಎಂದಿದ್ದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇಂದು ಯೂ ಟರ್ನ್ ತೆಗೆದುಕೊಂಡಿದ್ದಾರೆ. ಸೆಪ್ಟೆಂಬರ್ 19ರಂದು ಕರೆದಿರುವ ವಿಚಾರಣೆಗೆ ಹೋಗಲು ಆಗ್ತಿಲ್ಲ ಅಂತಾ ಹೇಳಿದ್ದಾರೆ.
ನಾಳೆಯ ಬದ್ಲು ತಮ್ಗೆ ಮತ್ತೊಂದು ದಿನ ಅವಕಾಶ ಕೊಡಬೇಕೆಂದು ಇಡಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಅಲ್ದೇ, ವಿಚಾರಣೆಯನ್ನ ಬೆಂಗಳೂರಿನಲ್ಲಿಯೇ ನಡೆಸಬೇಕು ಅನ್ನೋದರ ಕುರಿತಾಗಿಯೂ ಕೇಳಿಕೊಂಡಿದ್ದಾರಂತೆ. ಯಾವ ಕಾರಣಕ್ಕೆ ತಮ್ಗೆ ನೋಟಿಸ್ ಕೊಟ್ಟಿದ್ದಾರೆ ಅನ್ನೋದು ಗೊತ್ತಿಲ್ಲ. ಇಡಿ ಅಧಿಕಾರಿಗಳ ಭೇಟಿ ಬಳಿಕ ಮಾಹಿತಿ ನೀಡುತ್ತೇನೆ ಎಂದಿದ್ದಾರೆ.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಈ ನಿರ್ಧಾರದ ಹಿಂದೆ ಕಾಂಗ್ರೆಸ್ ನ ಕೆಲ ಪ್ರಮುಖ ನಾಯಕರ ಸಲಹೆ ಇರಬಹುದು ಅನ್ನೋ ಮಾತುಗಳು ರಾಜಕೀಯ ಪಡಸಾಲಿಗೆಯಲ್ಲಿ ಕೇಳಿ ಬರ್ತಿವೆ. ಡಿಕೆಶಿ ಬಂಧನ ಬಳಿಕ ಸಾಕಷ್ಟು ಬೆಳವಣಿಗೆಗಳು ಆಗಿದ್ದು, ಸದ್ಯಕ್ಕೆ ಬೇಡ. ಮತ್ತೊಂದು ದಿನ ಕಾಲಾವಕಾಶ ಕೇಳಿ ಅಂತಾ ಹೇಳಿರಬಹುದು ಎನ್ನಲಾಗ್ತಿದೆ.