ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಮತ ಎಣಿಕೆ ಕಾರ್ಯ ಇನ್ನು ಮುಗಿದಿಲ್ಲ. ಕಳೆದ 24 ಗಂಟೆಯಿಂದ ಮತ ಎಣಿಕೆ ನಡೆದಿದೆ. ರಾತ್ರಿ 12.45ಕ್ಕೆ ಮೊದಲ ಪ್ರಾಶಸ್ತ್ಯದ ಮತ ಎಣಿಕೆ ಮುಗಿದಿದ್ದು, ಇಂದು ಮಧ್ಯಾಹ್ನ ಫಲಿತಾಂಶ ಹೊರ ಬೀಳಲಿದೆ.
ಒಟ್ಟು 19 ಅಭ್ಯರ್ಥಿಗಳ ಪೈಕಿ 14 ಅಭ್ಯರ್ಥಿಗಳು ಹೊರ ಬಿದ್ದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ 2ನೇ ಪ್ರಾಶಸ್ತ್ಯತದ ಮತ ಎಣಿಕೆಯಲ್ಲೂ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಮೈ.ವಿ ರವಿಶಂಕರ್, ಜೆಡಿಎಸ್ ನ ಎಚ್.ಕೆ ರಾಮು ಹಿಂದಿದ್ದಾರೆ.