ಕರೋನಾದಿಂದ ಸಾವಿನ ಸುಳ್ ಸುದ್ದಿ: ಆರೋಪಿ ಬಂಧನ

409

ಕೆ.ಆರ್.ಪೇಟೆ: ಕರೋನಾದಿಂದಾಗಿ ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ನೆ ಹಕ್ಕಿಮಂಚನಹಳ್ಳಿ ಗ್ರಾಮದ ಸುನಿಲ ಸಾವನ್ನಪ್ಪಿದ್ದಾನೆ ಎಂದು ಸುಳ್ ಸುದ್ದಿ ಹಬ್ಬಿಸಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿಯೂ ವೈರಲ್ ಆಗಿ, ಖಾಸಗಿ ಸುದ್ದಿ ವಾಹಿನಿಯಲ್ಲೂ ಪ್ರಸಾರವಾಗಿತ್ತು. ಇದಕ್ಕೆ ಕಾರಣನಾದ ಆರೋಪಿಯನ್ನ ಬಂಧಿಸಲಾಗಿದೆ.

ಸುಳ್ ಸುದ್ದಿ ಹಬ್ಬಿಸಿದ ಅಂಬಿಗರಹಳ್ಳಿಯ 19 ವರ್ಷದ ಮುತ್ತುರಾಜ ಎಂಬಾತನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತನ್ನ ಸಾವಿನ ಸುದ್ದಿ ಎಲ್ಲೆಡೆ ಹರಿದಾಡ್ತಿರುವುದು ನೋಡಿದ ಸುನಿಲ, ಅದ್ರಿಂದ ಸಾಕಷ್ಟು ನೊಂದುಕೊಂಡು ಕೆ.ಆರ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಪ್ರಕರಣ ದಾಖಲಿಸಿಕೊಂಡ ಠಾಣೆ ಇನ್ಸ್ ಪೆಕ್ಟರ್ ಬ್ಯಾಟರಾಯನಗೌಡ ಅವರು ರಾತ್ರಿಯಿಡಿ ವಾಟ್ಸಪ್ ಮೂಲ ಹುಡುಕಿದಾಗ, ಮುತ್ತುರಾಜ ಎಂಬಾತ ಸಿಕ್ಕಿಬಿದ್ದಿದ್ದನೆ.

ಕರೋನಾ ವಿಚಾರದಲ್ಲಿ ಸುಳ್ ಸುದ್ದಿ ಹಬ್ಬಿಸಿದ್ರೆ ಏನಾಗುತ್ತೆ ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾದ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯನಗೌಡರನ್ನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ ಪಿ, ಸಿಪಿಐ ಸುಧಾಕರ ಮತ್ತಿತರೆ ಮೇಲಾಧಿಕಾರಿಗಳು ಅಭಿನಂದಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!