ಪ್ರಜಾಸ್ತ್ರ ಸುದ್ದಿ
ರಾಯಚೂರು: ಕೆರೆಗೆ ಬಿದ್ದು ತಂದೆ ಹಾಗೂ ಮಕ್ಕಳಿಬ್ಬರು ಮೃತಪಟ್ಟಿರುವ ಮಾಡಿಕೊಂಡಿರುವ ಘಟನೆ ಸಿರವಾರ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಲಕ್ಕಂದಿನ್ನಿ ಗ್ರಾಮದ ಮುದುಕಪ್ಪ(60) ಶಿವು ಮುದುಕಪ್ಪ(23) ಹಾಗೂ ಬಸವರಾಜ ಮುದುಕಪ್ಪ(20) ಮೃತ ದುರ್ದೈವಿಗಳು.
ಕಿರಿಯ ಮಗ ಬಸವರಾಜ ಕೆಲ ತಿಂಗಳ ಹಿಂದೆ ಮಾಯಮ್ಮ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಇಂದು ಹಣದ ವಿಚಾರವಾಗಿ ತಂದೆ ಹಾಗೂ ಮಗನ ನಡುವೆ ಜಗಳವಾಗಿದೆ. ಇತ್ತ ಸೊಸೆ ಕೆರೆಗೆ ಹಾರಿದ್ದಾಳೆ. ಆಗ ಮಾವ ಕೆರೆಗೆ ಜಿಗಿದು ಸೊಸೆಯನ್ನು ರಕ್ಷಿಸಿದ್ದಾನೆ.
ಇನ್ನೊಂದು ಕಡೆ ಅಣ್ತಂದಿರ ಜಗಳ ಜೋರಾಗಿ ಅವರೂ ಕೆರೆಗೆ ಬಿದ್ದಿದ್ದಾರೆ. ದುರಾದೃಷ್ಟವಶಾತ್ ಅವರಿಗೆ ಈಜು ಬರುವುದಿಲ್ಲ. ಹೀಗಾಗಿ ಮಕ್ಕಳನ್ನು ರಕ್ಷಿಸಲು ಹೋದ ತಂದೆ ಮುದುಕಪ್ಪ ಸೇರಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಬಳಿಕ ಘಟನೆಯ ಸತ್ಯಾಸತ್ಯತೆ ತಿಳಿದು ಬರಲಿದೆ.