ಪ್ರಜಾಸ್ತ್ರ ಅಪರಾಧ ಸುದ್ದಿ
ರಾಯಚೂರು: ಕಳೆದ ಮಾರ್ಚ್ 10ರಂದು ಲಿಂಗಸಗೂರು ಪಟ್ಟಣದ ಎನ್ ಜಿಎಲ್ ಲಾಡ್ಜ್ ಹತ್ತಿರದ ಪೊದೆಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಮಹಿಳೆಯ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಯರಡೋಣಾ ಗ್ರಾಮದ ದೇವಣ್ಣ(22) ಬಂಧಿತ ಆರೋಪಿ. ವಿಜಯಲಕ್ಷ್ಮಿ ಕೊಲೆಯಾದ ಮಹಿಳೆ. ಯರಡೋಣಾ ಗ್ರಾಮದ ವಿಜಯಲಕ್ಷ್ಮಿಯನ್ನು ಮಸ್ಕಿ ತಾಲೂಕಿನ ಅಂಕಶುದೊಡ್ಡಿ ಗ್ರಾಮದ ಸೋಮನಾಥ ಎಂಬುವರೊಂದಿಗೆ 8 ವರ್ಷಗಳ ಹಿಂದೆ ಮದುವೆ ಮಾಡಲಾಗಿದೆ. ಇವರಿಗೊಬ್ಬ ಮಗನಗಿದ್ದಾನೆ. 2 ವರ್ಷದ ಹಿಂದೆ ಗಂಡ ಮೃತಪಟ್ಟಿದ್ದು, ವಿಜಯಲಕ್ಷ್ಮಿ ತವರುಮನೆ ಯರಡೋಣಾಕ್ಕೆ ಬಂದಿದ್ದಾಳೆ.
ಅದೇ ಗ್ರಾಮದ ದೇವಣ್ಣ ಹಾಗೂ ವಿಜಯಲಕ್ಷ್ಮಿ ನಡುವೆ ಸಲುಗೆ ಬೆಳೆದಿದೆ. ಅದು ಮುಂದೆ ಅಕ್ರಮ ಸಂಬಂಧಕ್ಕೆ ತಿರುಗಿದೆ. ಮನೆಯಲ್ಲಿ ಗೊತ್ತಾಗಿ ಹುಡುಗಿನಿಗೆ ಬೈದು ಬಿದ್ದು ಹೇಳಿದರೂ ಕೇಳಿಲ್ಲ. ಮಹಿಳೆಗೆ ಬೈದು, ಹೊಡೆದು ಬುದ್ದಿ ಹೇಳಲಾಗಿದೆ. ಹೀಗಾಗಿ ಸುಮಾರು ಎರಡು ತಿಂಗಳಿನಿಂದ ಸಂಪರ್ಕ ಬಿಟ್ಟಿದ್ದಳು. ಕಳೆದ ಮಾರ್ಚ್ 10ರಂದು ಮುದಗಲ್ ಹತ್ತಿರದ ದೇವಸ್ಥಾನಕ್ಕೆ ವಿಜಯಲಕ್ಷ್ಮಿ ಹೋಗಿರುವುದು ದೇವಣ್ಣನಿಗೆ ಗೊತ್ತಾಗಿದೆ. ಆಕೆ ವಾಪಸ್ ಬರುವಾಗ ಆಕೆಯನ್ನು ನಂಬಿಸಿ ಲಿಂಗಸೂರಿಗೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿ ಅವರಿಬ್ಬರಿಗೂ ಜಗಳವಾಗಿದೆ. ಅದು ವಿಕೋಪಕ್ಕೆ ಹೋಗಿ ಕೊಲೆ ಮಾಡಿ ಪರಾರಿಯಾಗಿದ್ದ.