ಮದ್ಯದ ಚಟ: ಪತ್ನಿಯನ್ನೇ ಕೊಂದ ಪತಿ

177

ಪ್ರಜಾಸ್ತ್ರ ಅಪರಾಧ ಸುದ್ದಿ

ರಾಯಚೂರು: ಮದ್ಯದ ದಾಸನಾಗಿದ್ದ ವ್ಯಕ್ತಿಯೊಬ್ಬ ಪತ್ನಿಯನ್ನು ಹತ್ಯೆ ಮಾಡಿದ ಅಮಾನವೀಯ ಘಟನೆ ಲಿಂಗಸಗೂರು ತಾಲೂಕಿನ ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ನಡೆದಿದೆ. ಸುನಿತಾ(28) ಕೊಲೆಯಾದ ದುರ್ದೈವಿ. ಪತಿ ಬಸವರಾಜ ಕಂಬಲಿ ಕೊಲೆ ಆರೋಪಿ.

ಭಾನುವಾರ ಸಂಜೆ ಸುನಿತಾ ಹೊಲದಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿಗೆ ಬಂದ ಪತಿ ಕುಡಿಯಲು ಹಣ ಕೇಳಿದ್ದಾನೆ. ಆಕೆ ಕೊಡದೆ ಹೋದಾಗ ಗಲಾಟೆ ಮಾಡಿದ್ದಾನೆ. ನಂತರ ಅಲ್ಲಿಯೇ ಇದ್ದ ಸಲಾಕಿಯಿಂದ ಬಲಗಣ್ಣಿಕನ ಭಾಗಕ್ಕೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಸುನಿತಾ ಮೃತಪಟ್ಟಿದ್ದಾಳೆ.

ಮೃತ ಸುನಿತಾ ತವರು ಮನೆಯವರು ನೀಡಿದ ದೂರಿನ ಮೇಲೆ ಮಾವ, ಅತ್ತೆ, ಮೈದನ ಮೇಲೂ ಪ್ರಕರಣ ದಾಖಲಾಗಿದೆ. ಆರೋಪಿ ಬಸವರಾಜನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!