ಕರ್ನಾಟಕ ಕೇಂದ್ರೀಯ ವಿವಿ ಮಾಜಿ ಕುಲಪತಿ ಪ್ರೊ.ಮಹೇಶ್ವರಯ್ಯ ನಿಧನ

275

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ.ಎಚ್.ಎಂ ಮಹೇಶ್ವರಯ್ಯ ಧಾರವಾಡದಲ್ಲಿ ನಿಧನರಾಗಿದ್ದಾರೆ. 70 ವರ್ಷದ ಮಹೇಶ್ವರಯ್ಯನವರು ಕರೋನಾ ಸೋಂಕಿಗೆ ಒಳಗಾಗಿದ್ರು ಎಂದು ಹೇಳಲಾಗ್ತಿದೆ. 2015ರಿಂದ 2020ರ ತನಕ ಕುಲಪತಿಯಾಗಿ ನಿವೃತ್ತಿಯಾಗಿದ್ರು.

ಸಿಯುಕೆ ಕುಲಪತಿ ಆಗುವುದುಕ್ಕೂ ಮೊದ್ಲು ಮೈಸೂರು ವಿಶ್ವವಿದ್ಯಾಲಯದಲ್ಲಿ ಭಾರತೀಯ ಭಾಷಾ ಸಂಸ್ಥೆಯ ನಿರ್ದೇಶಕರಾಗಿದ್ರು. ಇದಕ್ಕೂ ಮೊದ್ಲು ಧಾರವಾಡ ವಿಶ್ವವಿದ್ಯಾಲಯದ ಭಾಷಾ ಶಾಸ್ತ್ರದ ಪ್ರಧ್ಯಾಪಕರಾಗಿದ್ರು. ಡಾ.ಆರ್.ಸಿ ಹಿರೇಮಠ ಅಧ್ಯಯನ ಪೀಠದ ನಿರ್ದೇಶಕರಾಗಿದ್ರು. ಸಿಂಡಿಕೆಟ್, ಸೆನೆಟ್, ಅಕಾಡೆಮಿ ಕೌನ್ಸಿಲ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪ್ರೊ.ಎಚ್.ಎಂ ಮಹೇಶ್ವರಯ್ಯನವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹಿತ್ತಲ ಗ್ರಾಮದವರಾಗಿದ್ದಾರೆ. ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ ಸೇರಿದಂತೆ ಅಪಾರ ಶಿಷ್ಯ ಬಳಗವನ್ನ ಅಗಲಿದ್ದಾರೆ. ಅವರ ಸಹದ್ಯೋಗಿಗಳು, ಸ್ನೇಹಿತರು, ಶಿಷ್ಯರು ಸಂತಾಪ ಸೂಚಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!