ಮೊಬೈಲ್ ಕಳ್ಳನಿಂದ 6 ಬೈಕ್ ವಶ

224

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಮೊಬೈಲ್ ಕಳ್ಳತನ ಮಾಡ್ತಿದ್ದ ಆರೋಪಿಯನ್ನ ಬಂಧಿಸಿದಾಗ 6 ಬೈಕ್ ಗಳನ್ನ ಕದ್ದಿರುವ ವಿಷಯ ಬಹಿರಂಗವಾಗಿದೆ. ರಾಮನಗರ ಜಿಲ್ಲೆ ಬಿಡದ ಹೋಬಳಿ ಹೆಜ್ಜಾಲ ಗ್ರಾಮದ ಮನೋಜ ಬಂಧಿತ ಆರೋಪಿಯಾಗಿದ್ದಾನೆ.

ಬಸ್ ಗಾಗಿ ಕಾಯುತ್ತಿದ್ದ ವ್ಯಕ್ತಿಗೆ ಚಾಕು ಇರಿದು ಮೊಬೈಲ್ ಕದ್ದ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಇದರೊಂದಿಗೆ ರಾಮನಗರ ಠಾಣೆಯಲ್ಲಿ ದಾಖಲಾಗಿದ್ದ 2 ಬೈಕ್ ಕಳ್ಳತನ ಪ್ರಕರಣ, ಚೆನ್ನಪಟ್ಟಣ ಪೂರ್ವ ಪೊಲೀಸ್ ಠಾಣೆ, ಬಿಡದಿ, ಅನ್ನಪೂರ್ಣೇಶ್ವರಿ ನಗರ, ರಾಜರಾಜೇಶ್ವರಿ ನಗರದಲ್ಲಿ ದಾಖಲಾಗಿದ್ದ ತಲಾ 1 ಬೈಕ್ ಕಳ್ಳತನ ಪ್ರಕರಣ ಬಯಲಾಗಿದ್ದು, 4 ಲಕ್ಷ ಮೌಲ್ಯದ 6 ಬೈಕ್ ಗಳನ್ನ ವಶಕ್ಕೆ ಪಡೆಯಲಾಗಿದೆ.




Leave a Reply

Your email address will not be published. Required fields are marked *

error: Content is protected !!