ನವದೆಹಲಿ: ಇಂದು 4ನೇ ಹಂತದ ಲಾಕ್ ಡೌನ್ ಕೊನೆಯ ದಿನವಾಗಿದೆ. ಹೀಗಾಗಿ ನಾಳೆಯಿಂದ ಏನು ಅನ್ನೋದು ಜನರ ಪ್ರಶ್ನೆಯಾಗಿದೆ. ಹೀಗಾಗಿ ಇಂದು 11 ಗಂಟೆಗೆ ಪ್ರಧಾನಿಯ ಮನ್ ಕೀ ಬಾತ್ ನಲ್ಲಿ ಈ ಬಗ್ಗೆ ಹೇಳಬಹುದಾ ಅನ್ನೋ ಕುತೂಹಲವಿದೆ.
4ಬಾರಿ ಲಾಕ್ ಡೌನ್ ಘೋಷಣೆ ಮಾಡಿದ್ರೂ ಕರೋನಾ ಕಂಟ್ರೋಲ್ ಮಾಡಲಾಗಲಿಲ್ಲ. ದಿನಗಳು ಕಳೆದಂತೆ ಎಲ್ಲವೂ ಕೈಮೀರಿ ಹೋಗಲು ಶುರು ಮಾಡಿತು. ಕೆಲವು ಕಡೆ ಜನರು ರೊಚ್ಚಿಗೆದ್ದರು. ಲಾಕ್ ಡೌನ್ ಸಡಿಲಿಕೆಯಾಗ್ತಾ ಬಂತು. ಇದನ್ನೇ ಜನರು ದುರ್ಬಳಕೆ ಮಾಡಿಕೊಂಡು ಎಲ್ಲ ನಿಯಮಗಳನ್ನ ಗಾಳಿಗೆ ತೂರಿದ್ರು. ಅದರಲ್ಲಿ ಅಧಿಕಾರಿಗಳ ಪಾತ್ರವೂ ಸೇರಿಕೊಂಡಿತು.
ಈಗ ಸರ್ಕಾರದ ಮುಂದೆ ಲಾಕ್ ಡೌನ್ ಮುಂದುವರೆಸುವ ಉದ್ದೇಶವಿದೆಯಾ? ಇವತ್ತೇ ಕೊನೆಯ ದಿನವಾಗುತ್ತಾ? ಒಂದು ವೇಳೆ ಮುಂದುವರೆಸಿದ್ರೆ, ಇದೇ ರೀತಿ ಎಲ್ಲಿಯವರೆಗೆ ಲಾಕ್ ಡೌನ್ ಸಾಧ್ಯ. ಇದರ ಸಾಮಾನ್ಯ ಜನರ ಬದುಕೇನು ಅನ್ನೋ ಪ್ರಶ್ನೆ ಮೂಡಿದೆ. ಇದಕ್ಕೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿ ಉತ್ತರಿಸ್ತಾರಾ? ಅಥವ ಕ್ಯಾಬಿನೆಟ್ ಸಚಿವರ ಕೈಯಿಂದ ಸುದ್ದಿಗೋಷ್ಠಿ ನಡೆಸ್ತಾರಾ ಅನ್ನೋದು ಕಾದು ನೋಡಬೇಕು.