ಪ್ರಜಾಸ್ತ್ರ ಸುದ್ದಿ
ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದ ತೋಟದ ಬಾವಿಯೊಂದರಲ್ಲಿ ಮಕ್ಕಳಿಬ್ಬರೊಂದಿಗೆ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಕ್ಕಮ್ಮ ಶ್ರೀಶೈಲ ಗುಬ್ಬೇವಾಡ(30) ಹಾಗೂ ಮಕ್ಕಳಾದ ಅವ್ವಮ್ಮ(03), ಅಶ್ವಿನಿ(01) ಮೃತ ದುರ್ದೈವಿಗಳು.
ಮೃತ ಅಕ್ಕಮ್ಮಳಿಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದು, ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳಂತೆ. ಆಸ್ಪತ್ರೆಗೆ ತೋರಿಸಿದ್ದರು ಮತ್ತು ಹಿರಿಯರು ಸಾಕಷ್ಟು ಬಾರಿ ತಿಳಿ ಹೇಳಿದ್ದರಂತೆ. ಹೀಗಿರುವಾಗ ಮಂಗಳವಾರ ಸಂಜೆ ಸುಮಾರು 6ಗಂಟೆ ಸಮಯದಲ್ಲಿ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬುಧವಾರ ಮಧ್ಯಾಹ್ನ ಮೃತದೇಹಗಳು ಪತ್ತೆಯಾಗಿವೆ. ಈ ಬಗ್ಗೆ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಇಂಡಿ ಉಪ ವಿಭಾಗದ ಡಿಎಸ್ಪಿ ಚಂದ್ರಕಾಂತ ನಂದರೆಡ್ಡಿ, ಸಿಂದಗಿ ಸಿಪಿಐ ರವಿ ಉಕ್ಕುಂದ ಹಾಗೂ ದೇವರಹಿಪ್ಪರಗಿ ಪಿಎಸ್ಐ ಸುರೇಶ ಗಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.