ಕುಡಿದ ಮತ್ತಿನಲ್ಲಿ ತಾಯಿ ಕೊಲೆ!

206

ಪ್ರಜಾಸ್ತ್ರ ಅಪರಾಧ ಸುದ್ದಿ

ಚಿತ್ರದುರ್ಗ: ಕುಡಿದ ಮತ್ತಿನಲ್ಲಿ ತಾಯಿಯನ್ನೇ ಮಗ ಕೊಂದಿರುವ ಘಟನೆ ಮೊಳಕಾಲ್ಮೂರು ಪಟ್ಟಣದ ಮಾರುತಿ ಬಡಾವಣೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ. 45 ವರ್ಷದ ರತ್ನಂ ಕೊಲೆಯಾದ ದುರ್ದೈವಿ.

ರತ್ನಂಗೆ ಲೋಕೇಶ ಅನ್ನೋ ಒಬ್ಬನೆ ಮಗನಿದ್ದು, ಕುಡಿತದ ದಾಸನಾಗಿದ್ದನಂತೆ. ಕುಡಿದು ಬಂದು ತಾಯಿಗೆ ಕಿರುಕುಳ ನೀಡ್ತಿದ್ದನಂತೆ. ಕುಡಿದ ನಶೆಯಲ್ಲಿಯೇ ಗುರುವಾರ ತಡರಾತ್ರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!