ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಲೋಕಸಭಾ ಚುನಾವಣೆ ಸಂಬಂಧ ಪಕ್ಷಗಳ ಚಟುವಟಿಕೆ ಜೋರಾಗಿವೆ. ಯಾವ ಕ್ಷೇತ್ರದಿಂದ ಯಾರನ್ನು ಕಣಕ್ಕೆ ಇಳಿಸಬೇಕು ಎನ್ನುವ ಬಗ್ಗೆ ಸಭೆ ನಡೆಸಿ, ಹೈಕಮಾಂಡ್ ಗೆ ಹೆಸರುಗಳನ್ನು ಕಳಿಸುತ್ತಿದ್ದಾರೆ. ಶಿವಮೊಗ್ಗ ಕ್ಷೇತ್ರದಿಂದ ನಟ ಶಿವರಾಜಕುಮಾರ್ ಪತ್ನಿ ಗೀತಾ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ಸಚಿವ ಕೆ.ಎನ್ ರಾಜಣ್ಣ ನೀಡಿರುವ ಹೇಳಿಕೆ ಸ್ಪಷ್ಟನೆ ನೀಡಿದೆ.
ನಾನು ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿಲ್ಲ. ಹೈಕಮಾಂಡ್ ಕೆಲ ಕ್ಷೇತ್ರಗಳಲ್ಲಿ ಸಚಿವರು ಸ್ಪರ್ಧಿಸಬೇಕಾಗುತ್ತೆ ಎಂದಿದೆ. ಆದರೆ ಯಾವ ಕ್ಷೇತ್ರ ಎನ್ನುವುದು ಅಂತಿಮವಾಗಿಲ್ಲ. ನನ್ನ ಹೆಸರು ಬಂದರೂ ಸ್ಪರ್ಧಿಸುತ್ತೇನೆ. ಶಿವಮೊಗ್ಗದಿಂದ ನಟ ಶಿವರಾಜಕುಮಾರ್ ಪತ್ನಿ ಗೀತಾ ಅವರನ್ನು ಕಣಕ್ಕೆ ಇಳಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಅದು ಫೈನಲ್ ಆಗಿರಬಹುದೇನೋ ಗೊತ್ತಿಲ್ಲ ಅಂತಾ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಈಡಿಗ ಸಮುದಾಯದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್ ಬಹಿರಂಗವಾಗಿ ನಟ ಶಿವರಾಜಕುಮಾರಗೆ ಎಂಪಿ ಚುನಾವಣೆಗೆ ಸ್ಪರ್ಧಿಸುವ ಕುರಿತು ಹೇಳಿದ್ದರು. ಆಗ ಶಿವರಾಜಕುಮಾರ್ ಸಹ, ನಾವು ರಾಜಕೀಯದಿಂದ ದೂರ. ಬಣ್ಣ ಹಚ್ಚಿಕೊಂಡು ನಿಮ್ಮನ್ನು ರಂಜಿಸುವುದಷ್ಟೆ ಗೊತ್ತು. ಅದಕ್ಕಾಗಿ ಮನೆಯಲ್ಲಿ ಒಬ್ಬರು ಇದ್ದಾರೆ ಎಂದು ಪತ್ನಿ ಗೀತಾ ಕುರಿತು ಪರೋಕ್ಷವಾಗಿ ಹೇಳಿದ್ದರು. ಇದೆಲ್ಲವೂ ನೋಡಿದರೆ ಗೀತಾ ಶಿವರಾಜಕುಮಾರ್ ಎಂಪಿ ಚುನಾವಣೆಗೆ ನಿಲ್ಲುವುದು ಫಿಕ್ಸ್ ಎನ್ನಬಹುದು. ತಂದೆ ಸಿಎಂ ಆಗಿದ್ದವರು. ಬಿಜೆಪಿಯಲ್ಲಿರುವ ಸಹೋದರ ಕುಮಾರ್ ಬಂಗಾರಪ್ಪ ಸಚಿವರಾಗಿದ್ದರು. ಕಾಂಗ್ರೆಸ್ ನಲ್ಲಿರುವ ಸಹೋದರ ಮಧು ಬಂಗಾರಪ್ಪ ಸಚಿವರಾಗಿದ್ದಾರೆ. ಹೀಗಾಗಿ ಗೀತಾ ಶಿವರಾಜಕುಮಾರ್ ಸ್ಪರ್ಧೆ ಅಚ್ಚರಿ ಎನಿಸುವುದಿಲ್ಲ.