ಬೆಂಗಳೂರು: ಮಾಜಿ ಸ್ಪೀಕರ್, ಶಾಸಕ ರಮೇಶಕುಮಾರ ಎಷ್ಟು ಕೊಲೆಗಳನ್ನ ಮಾಡಿಸಿದ್ದಾರೆ ಅನ್ನೋದು ಗೊತ್ತಿದೆ ಎಂದು ಹೊನ್ನಳ್ಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ರಮೇಶಕುಮಾರ ಏನು ಸತ್ಯ ಹರಿಶ್ಚಂದ್ರ. ಸ್ಪೀಕರ್ ಆಗಿದ್ದಾಗ ಏನೆಲ್ಲ ಮಾಡಿದ್ದಾರೆ ಅನ್ನೋದು ಗೊತ್ತಿದೆ. ಅವರ ಮೇಲಿನ ದಾಖಲೆಗಳನ್ನ ಬಿಡುಗಡೆ ಮಾಡುತ್ತೇನೆ. ರಮೇಶಕುಮಾರ ಕ್ಷಮೆ ಕೇಳಬೇಕು. ಇಲ್ದಿದ್ರೆ ವಿಧಾನಸಭೆಯಿಂದ ಅಮಾನತು ಮಾಡಿ ಎಂದು ಆಗ್ರಹಿಸಿದ್ದಾರೆ.