ಬಿಜ್ನೋರ್: ಇದು ನಿಜಕ್ಕೂ ಅತ್ಯಂತ ಆಘಾತಕಾರಿ ಸುದ್ದಿ. ಗಂಡನಿಗೆ ತರಕಾರಿ ತೆಗೆದುಕೊಂಡು ಬನ್ನಿ ಅಂತಾ ಪತ್ನಿ ಹೇಳಿದ್ದಾಳೆ. ಆದ್ರೆ, ಆತ ಸ್ಮಶಾನದಿಂದ ಶವದ ಕೈಯನ್ನ ಕತ್ತರಿಸಿಕೊಂಡು ಬಂದಿದ್ದಾನೆ. ಅಲ್ದೇ, ಅದನ್ನ ಬೇಯಿಸಿ ಅಡುಗೆ ಮಾಡಲು ಹೇಳಿದ್ದಾನಂತೆ. ಅಷ್ಟಕ್ಕೂ ಇಂಥಾ ಆಘಾತಕಾರಿ ಘಟನೆ ನಡೆದಿದ್ದು ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ.
ಸಂಜಯ ಅಲಿಯಾಸ್ ಸಂಜು ಅನ್ನೋ ಭೂಪ ಈ ರೀತಿ ಮಾಡಿದ್ದಾನೆ. ಪತಿ ತೆಗೆದುಕೊಂಡು ಬಂದ ಕೈಯನ್ನ ನೋಡಿದ ಪತ್ನಿ ಸುನೀತಾ ಮೂರ್ಚೆ ಹೋಗಿದ್ದಾಳೆ. ಈಕೆಯನ್ನ ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸ್ರು ಆರೋಪಿಯ ಮನೆಗೆ ಭೇಟಿ ನೀಡಿ ಆತನನ್ನು ಬಂಧಿಸಿದ್ದಾರೆ. ಸಂಜಯ ಅಲಿಯಾಸ್ ಸಂಜು ಮಾನಸಿಕ ರೋಗಿಯೆಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆ ಇದೀಗ ಎಲ್ಲೆಡೆ ವೈರಲ್ ಆಗಿದೆ.