ಪ್ರಜಾಸ್ತ್ರ ಸುದ್ದಿ
ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರುತ್ತಾರೆ ಅನ್ನೋ ಚರ್ಚೆ ಮತ್ತೆ ನಡೆದಿದೆ. ಈ ಬಗ್ಗೆ ಮಾತನಾಡಿರುವ ಅವರು, ನಾನು ಎಲೆಕ್ಷನ್ ಗೆ ನಿಂತಾಗಿನಿಂದ ಇದು ಕೇಳಿ ಬರುತ್ತಿದೆ. ನನ್ನ ಜಿಲ್ಲೆಯ ಅಭಿವೃದ್ಧಿ ನನ್ನ ಉದ್ದೇಶವಾಗಿದೆ. ಯಾವುದೇ ಪಕ್ಷ ಸೇರಲು ಈಗಲ ತಾಂತ್ರಿಕ ಸಮಸ್ಯೆಯಿದೆ ಎಂದಿದ್ದಾರೆ.
ನಾನು ಪಕ್ಷೇತರು ನಿಂತು ಗೆದ್ದಿದ್ದೇನೆ. ಯಾವುದೇ ಪಕ್ಷಕ್ಕೆ ಸೇರೋದಕ್ಕೆ ಮಂಡ್ಯ ಜನರು ಹೇಳಬೇಕು. ನಾನಾಗಿ ನಾನು ನಿರ್ಧಾರ ತೆಗೆದುಕೊಳ್ಳಲು ಆಗೋದಿಲ್ಲ. ಇನ್ನು ಅಭಿಷೇಕ್ ಗೂ ಚುನಾವಣೆಗೆ ನಿಲ್ಲಿಸಿ ಎಂದು ಜನರು ಹೇಳುತ್ತಿದ್ದಾರೆ. ಆದರೆ, ಚುನಾವಣೆಗೆ ಸ್ಪರ್ಧಿಸುವುದು ಅಭಿಷೇಕ್ ಗೆ ಬಿಟ್ಟ ವಿಚಾರ ಎಂದಿದ್ದಾರೆ.