ಪ್ರಜಾಸ್ತ್ರ ಅಪರಾಧ ಸುದ್ದಿ
ಬೆಂಗಳೂರು: ಅಕ್ಕನೊಂದಿಗೆ ಅನೈತಿಕ ಸಂಬಂಧ ಬೆಳೆಸಲು ಯತ್ನಿಸುತ್ತಿದ್ದ ಯುವಕನೊಬ್ಬನನ್ನು ಹತ್ಯೆ ಮಾಡಿ, ನಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ. ಮುನಿರಾಜು ಹಾಗೂ ಆತನ ಮೂವರು ಸ್ನೇಹಿತರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ.
ಪತಿಯಿಂದ ದೂರವಿದ್ದ ಮಹಿಳೆ ಮಾಲೂರಿನಲ್ಲಿ ತಮ್ಮ ಮುನಿರಾಜು ಜೊತೆಗೆ ವಾಸವಾಗಿದ್ದರು. ಆಕೆಯೊಂದಿಗೆ ಯುವಕನೊಬ್ಬ ಸಂಬಂಧ ಬೆಳಸಲು ಯತ್ನಿಸಿದ್ದನಂತೆ. ಈ ವಿಚಾರ ತಿಳಿದ ಮುನಿರಾಜು, ತನ್ನ ಸ್ನೇಹಿತರ ಜೊತೆಗೂಡಿ ಭಾಸ್ಕರ್ ಎಂಬಾತನನ್ನು ಕೆಬ್ಬಾಳಕ್ಕೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಹೊಡೆದಿದ್ದಾರೆ.
ಹೊಡೆತ ತಿಂದ ಯುವಕ ಮೃತಪಟ್ಟಿದ್ದಾನೆ. ನಂತರ ಅವನನ್ನು ಆಟೋದಲ್ಲಿ ಹಾಕಿಕೊಂಡು ರಾತ್ರಿಯೆಲ್ಲ ಸುತ್ತಾಡಿದ್ದಾರೆ. ನಂತರ ಅನ್ನಪೂರ್ಣೇಶ್ವರ ನಗರದ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ.