ಹತ್ಯೆ ಮಾಡಿ ಪೊಲೀಸರಿಗೆ ಶರಣಾದರು

282

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಅಕ್ಕನೊಂದಿಗೆ ಅನೈತಿಕ ಸಂಬಂಧ ಬೆಳೆಸಲು ಯತ್ನಿಸುತ್ತಿದ್ದ ಯುವಕನೊಬ್ಬನನ್ನು ಹತ್ಯೆ ಮಾಡಿ, ನಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ. ಮುನಿರಾಜು ಹಾಗೂ ಆತನ ಮೂವರು ಸ್ನೇಹಿತರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ.

ಪತಿಯಿಂದ ದೂರವಿದ್ದ ಮಹಿಳೆ ಮಾಲೂರಿನಲ್ಲಿ ತಮ್ಮ ಮುನಿರಾಜು ಜೊತೆಗೆ ವಾಸವಾಗಿದ್ದರು. ಆಕೆಯೊಂದಿಗೆ ಯುವಕನೊಬ್ಬ ಸಂಬಂಧ ಬೆಳಸಲು ಯತ್ನಿಸಿದ್ದನಂತೆ. ಈ ವಿಚಾರ ತಿಳಿದ ಮುನಿರಾಜು, ತನ್ನ ಸ್ನೇಹಿತರ ಜೊತೆಗೂಡಿ ಭಾಸ್ಕರ್ ಎಂಬಾತನನ್ನು ಕೆಬ್ಬಾಳಕ್ಕೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಹೊಡೆದಿದ್ದಾರೆ.

ಹೊಡೆತ ತಿಂದ ಯುವಕ ಮೃತಪಟ್ಟಿದ್ದಾನೆ. ನಂತರ ಅವನನ್ನು ಆಟೋದಲ್ಲಿ ಹಾಕಿಕೊಂಡು ರಾತ್ರಿಯೆಲ್ಲ ಸುತ್ತಾಡಿದ್ದಾರೆ. ನಂತರ ಅನ್ನಪೂರ್ಣೇಶ್ವರ ನಗರದ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!