ಬೆಂಗಳೂರು: ಆಟೋ ಚಾಲಕನನ್ನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಚಿಂತಾಮಣಿ ಮೂಲದ 21 ವರ್ಷದ ಮನೋಜಕುಮಾರ ಕೊಲೆಯಾದ ದುರ್ದೈವಿ.
ಅಂದ್ರಹಳ್ಳಿಯ ನಿವಾಸಿಯಾದ ಮನೋಜಕುಮಾರ ಆಟೋ ಮತ್ತು ಕ್ಯಾಂಟರ್ ಕೆಲಸ ಮಾಡ್ತಿದ್ದ. ಕಳೆದ ಎರಡು ತಿಂಗಳ ಹಿಂದೆ ಸುಂಕದಕಟ್ಟೆಯಲ್ಲಿ ವಾಸವಾಗಿದ್ದ. ಹೆಗ್ಗನಹಳ್ಳಿ ಮೇನ್ ರೋಡ್ ಬಳಿಯ ರಾಜೇಂದ್ರ ಪಾಲಿಟೆಕ್ನಿಕ್ ಹತ್ತಿರ ಮೊಬೈಲ್ ನಲ್ಲಿ ಮಾತ್ನಾಡ್ತಿದ್ದ, ಈ ವೇಳೆ ಆಟೋದಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಮನೋಜಕುಮಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬಂದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸ್ರು ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಹಣಕಾಸಿನ ವಿಚಾರಕ್ಕೆ ಸ್ನೇಹಿತರೇ ಹತ್ಯೆ ಮಾಡಿರುವ ಶಂಕೆಯಿದ್ದು ತನಿಖೆ ನಡೆಸಲಾಗ್ತಿದೆ.