ಒಂದು ಗುಂಟೆ ಜಾಗಕ್ಕಾಗಿ ಚಿಕ್ಕಪ್ಪನ ಕೊಲೆ

228

ಪ್ರಜಾಸ್ತ್ರ ಅಪರಾಧ ಸುದ್ದಿ

ಮೈಸೂರು: ಒಂದು ಗುಂಟೆ ಜಾಗಕ್ಕಾಗಿ ಚಿಕ್ಕಪ್ಪನನ್ನ ಕೊಲೆ ಮಾಡಿರುವ ಘಟನೆ ನಂಜಗೂಡು ತಾಲೂಕಿನ ಆಲಂಬೂರ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಯ್ಯ(50) ಕೊಲೆಯಾದ ದುರ್ದೈವಿ. ಸಿದ್ದರಾಜು(35) ಕೊಲೆ ಮಾಡಿದ ವ್ಯಕ್ತಿಯಾಗಿದ್ದಾನೆ.

ಪಿತ್ರಾರ್ಜಿತ ಆಸ್ತಿಯಲ್ಲಿ ತಲಾ 18 ಗುಂಟೆ ಜಮೀನು ಹಂಚಿಕೆ ಮಾಡಲಾಗಿದೆ. ಇದರ ನಡುವೆ ಲಕ್ಷ್ಮಯ್ಯನಿಗೆ 1 ಗುಂಟೆ ಜಾಗ ಹೆಚ್ಚಿಗೆ ಹೋಗಿದೆ. ಆದ್ರೆ, ಆತ ತನಿಗೆ ಬಂದಿದ್ದ ಜಾಗ ಮಾರಾಟ ಮಾಡಿದ್ದ. ಹೀಗಾಗಿ ಸಹೋದರ ರಾಜು ಮಗ ಸಿದ್ದರಾಜು 1 ಗುಂಟೆ ಜಾಗದ ದುಡ್ಡು ಕೇಳಿದ್ದಾನೆ.

ಈ ವಿಚಾರದಲ್ಲಿ ಗ್ರಾಮದಲ್ಲಿ ರಾಜಿ ಪಂಚಾಯ್ತಿಯಾಗಿದೆ. ಈ ವೇಳೆ ಸಿಟ್ಟಿಗೆದ್ದ ಸಿದ್ದರಾಜು ಚಾಕುವಿನಿಂದ ಚಿಕ್ಕಪ್ಪನನ್ನ ಇರಿದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗ್ತಿದೆ. ಆತನ ಬಂಧನ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!