ಮೈಸೂರು: ಇಷ್ಟು ದಿನ ಎಣ್ಣೆ ಇಲ್ಲವೆಂದು ಬಡಬಡಿಸ್ತಿದ್ದ ಜನಕ್ಕೆ ಸೋಮವಾರದಿಂದ ಮದ್ಯ ಪ್ರಾಪ್ತಿಯಾಗಿದೆ. ಹೀಗೆ ಎಣ್ಣೆ ಸಿಕ್ಕ ದಿನವೇ ಮದಿರೆಯ ನಶೆಯಲ್ಲಿ ಸ್ನೇಹಿತನೊಬ್ಬನನ್ನ ಕೊಲೆ ಮಾಡಲಾಗಿದೆ. 22 ವರ್ಷದ ಸತೀಶ ಕೊಲೆಯಾದ ದುರ್ದೈವಿ.
ಕ್ಯಾತಮಾರನಹಳ್ಳಿಯ ಸತೀಶ ಅನ್ನೋ ಯುವಕನನ್ನ ಆತನ ಸ್ನೇಹಿತರಾದ ಕಿರಣ, ಮಧು ಹಾಗೂ ಇತರರು ಸೇರಿಕೊಂಡು ಸೋಮವಾರ ರಾತ್ರಿ ಮನೆಯಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ಮನೆಯಿಂದ ಕೇವಲ 100 ಮೀಟರ್ ಅಂತರದಲ್ಲಿಯೇ ಸತೀಶನನ್ನ ದೊಣ್ಣೆಯಿಂದ ಹೊಡೆದು, ಹರಿತವಾದ ಆಯುಧದಿಂದ ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾರೆ.
ಕೊಲೆ ಮಾಡಿದವರು ಮದ್ಯ ಸೇವನೆ ಮಾಡಿದ್ರು ಎಂದು ಸ್ಥಳೀಯರು ಹೇಳ್ತಿದ್ದಾರೆ. ಈ ಬಗ್ಗೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಬೆಂಗಳೂರಿನಲ್ಲಿ ಸಹ ಮದ್ಯದ ನಿಶೆಯಲ್ಲಿ ಹತ್ಯೆ ಮಾಡಲಾಗಿದೆ. 45 ವರ್ಷದ ಶ್ರೀನಿವಾಸ ಕೊಲೆಯಾದ ದುರ್ದೈವಿ. ಮದ್ಯ ಶುರುವಾದ ಸೋಮವಾರ ಬೆಳಗ್ಗೆ ಶ್ರೀನಿವಾಸ ಹಾಗೂ ಸಂತೋಷ ಎಂಬುವರು ಎಣ್ಣೆ ತೆಗೆದುಕೊಂಡು ದೊಮ್ಮಲೂರಿನ ಹತ್ತಿದ ಕೊಠಡಿಯೊಂದರಲ್ಲಿ ಪಾರ್ಟಿ ಮಾಡಿದ್ದಾರೆ.
ಮದ್ಯ ಸೇವನೆ ಟೈಂನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಜಗಳವಾಗಿದೆ. ಆಗ ಸಂತೋಷ ದೊಣ್ಣೆಯಿಂದ ಶ್ರೀನಿವಾಸಗೆ ತಲೆಗೆ ಹೊಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಆತ ಮೃತಪಟ್ಟಿದ್ದಾನೆ ಅನ್ನೋದು ತಿಳಿದು ಬಂದಿದೆ. ಜೀವನಭೀಮ ನಗರದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.