ಪ್ರಜಾಸ್ತ್ರ ಸುದ್ದಿ
ಮೈಲಾರ: ಹೂವಿನಹಡಗಲಿ ತಾಲೂಕಿ ಪ್ರಸಿದ್ಧ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಭವಿಷ್ಯ ನುಡಿದಿದ್ದು, ಮುತ್ತಿನರಾಶಿ ಮೂರು ಭಾಗ ಆದಿತಲೆ ಪರಾಕ್ ಎಂದಿದ್ದಾರೆ. ಇದು ರಾಜ್ಯದ ರೈತರ ಹಾಗೂ ರಾಜಕೀಯಕ್ಕೆ ನುಡಿದ ಭವಿಷ್ಯವೆಂದು ವಿಶ್ಲೇಷಿಸಲಾಗಿದೆ.
ಗೊರವಯ್ಯ ಕಾರ್ಣಿಕ ಕೇಳಲು ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಇಲ್ಲಿಯ ಕಾರ್ಣಿಕ ನುಡಿಗಳು ರಾಜ್ಯದ ಮುಂದಿನ ವರ್ಷದ ಭವಿಷ್ಯ ಎಂದು ನಂಬಲಾಗ್ತಿದೆ.