ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಒಂದಲ್ಲ ಒಂದು ಪ್ರಕರಣಗಳು ದಾಖಲಾಗುತ್ತಲೇ ಇವೆ. ಇದೀಗ ಮತ್ತೊಂದು ಕಂಟಕ ಎದುರಾಗಿದೆ. ಅಂದೇರಿಯ ಕೋರ್ಟ್ ನಟಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ.
ನಟ ಸುಶಾಂತ ಸಿಂಗ್ ರಾಜಪೂತ್ ಸಾವಿನ ವಿಚಾರದಲ್ಲಿ ನಡೆದ ಟಿವಿ ಸಂದರ್ಶನವೊಂದರಲ್ಲಿ ಗೀತರಚನೆಕಾರ ಜಾವೇದ್ ಅಖ್ತರ್ ಹೆಸರು ಪ್ರಸ್ತಾಪ ಮಾಡಿದ್ದಕ್ಕೆ ಮಾನಹಾನಿ ಪ್ರಕರಣವನ್ನ 2020 ನವೆಂಬರ್ ನಲ್ಲಿ ಪ್ರಕರಣ ದಾಖಲಿಸಿದ್ರು. ಫೆಬ್ರವರಿ 1ರಂದು ಸಮನ್ಸ್ ನೀಡಿದ್ದು ಮಾರ್ಚ್ 1ಕ್ಕೆ ಕೋರ್ಟ್ ಮುಂದೆ ಹಾಜರಾಬೇಕಿತ್ತು.
ಸೋಮವಾರ ನಟಿ ಕಂಗನಾ ಕೋರ್ಟ್ ಗೆ ಹಾಜರಾಗಿಲ್ಲ. ಅಲ್ದೇ, ಹಾಜರಾಗದಿರುವುದಕ್ಕೆ ವಿನಾಯಿತಿ ಕೋರಿ ಅರ್ಜಿ ಸಹ ಸಲ್ಲಿಸಿರ್ಲಿಲ್ಲ. ಹೀಗಾಗಿ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ.