ಹಳ್ಳದಲ್ಲಿ ಕೊಚ್ಚಿ ಹೋದ ದಂಪತಿ

313

ಪ್ರಜಾಸ್ತ್ರ ಸುದ್ದಿ

ವಿಜಯನಗರ: ಮಂಗಳವಾರ ಸಂಜೆಯಿಂದ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ. ಹೀಗಾಗಿ ಊರಿಗೆ ವಾಪಸ್ ಆಗುತ್ತಿದ್ದಾಗ ಬೈಕ್ ಸಮೇತ ದಂಪತಿಯಿಬ್ಬರು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಹೂವಿನಹಡಗಲಿ ತಾಲೂಕಿನ ಕಾಲ್ವಿ ಗ್ರಾಮದ ಬಳಿಯ ಹಳ್ಳದಲ್ಲಿ ಈ ಘಟನೆ ನಡೆದಿದೆ.

ಮಲ್ಲಿಕಾರ್ಜುನ ಹಾಗೂ ನಿರ್ಮಲಾ ಅನ್ನೋ ದಂಪತಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಪತಿ ಮಲ್ಲಿಕಾರ್ಜುನ ಮೃತದೇಹ ಪತ್ತೆಯಾಗಿದೆ. ನಿರ್ಮಲಾ ಮೃತದೇಹ ಹುಡುಕಾಟ ನಡೆಸಲಾಗ್ತಿದೆ. ಪತ್ನಿ ಊರಾದ ತಂಬ್ರಹಳ್ಳಿ ಮೊತ್ಕೂರು ಗ್ರಾಮಕ್ಕೆ ಹೋಗಿ ವಾಪಸ್ ಆಗ್ತಿದ್ದಾಗ ಅನಾಹುತ ನಡೆದಿದೆ.

ಬೆಳಗ್ಗೆ ದಾರಿ ಹೋಕರು ಬೈಕ್ ನೋಡಿದ್ದಾರೆ. ಬಳಿಕ ಪರಿಶೀಲನೆ ನಡೆಸಿದಾಗ ಪತಿಯ ಮೃತದೇಹ ಪತ್ತೆಯಾಗಿದೆ. ಪತ್ನಿಯ ಮೃತದೇಹದ ಹುಡುಕಾಟ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!