ಬೆಂಗಳೂರು: ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ವೆಂಕಟಾಚಲ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ರಚನೆಯಾದ್ಮೇಲೆ, ನ್ಯಾಯಮೂರ್ತಿ ಎನ್.ವೆಂಕಟಾಚಲ ಅವರು ಬಂದ್ಮೇಲೆ ಇದರ ಬಗ್ಗೆ ಜನಕ್ಕೆ ಗೊತ್ತಾಗಿದ್ದು. ತಮ್ಮ ಖಡಕ್ ಆಡಳಿತದಿಂದ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ರು. ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲೂಕುಗಳಲ್ಲಿ ಮಹತ್ವದ ಸಭೆ ಮಾಡುವ ಮೂಲಕ ಜನರ ಸಮಸ್ಯೆಯನ್ನ ಎಲ್ಲಿಯೇ ಬಗೆಹರಿಯುವಂತೆ ಮಾಡ್ತಿದ್ರು.
ಲೋಕಾಯುಕ್ತ ಸಂಸ್ಥೆ ಅಂದ್ರೆ ಹೇಗಿರಬೇಕು ಅನ್ನೋದಕ್ಕೆ ಸ್ಪಷ್ಟ ದಾರಿ ತೋರಿಸಿದವರು. ಇವರು ಅಧಿಕಾರದಲ್ಲಿ ಇರುವಷ್ಟು ದಿನ ಭ್ರಷ್ಟರಿಗೆ ನಡುಕವಿತ್ತು. ಲೋಕಾಯುಕ್ತರು ದಾಳಿ ಮಾಡಿದ್ದಾರೆ ಅಂದ್ರೆ ದೊಡ್ಡ ತಿಮಿಂಗಲ ಗಾಳಕ್ಕೆ ಬಿದ್ದಿದೆ ಅಂತಾನೆ ಲೆಕ್ಕ. ಅಷ್ಟರ ಮಟ್ಟಿಗೆ ಖಡಕ್ ಆಗಿದ್ರು. ತಮ್ಮ ಕಾರ್ಯಶೈಲಿಯಿಂದ ಮನೆ ಮಾತಾಗಿದ್ದ ಎನ್. ವೆಂಕಟಾಚಲ ಅವರು ಇಂದು ನಿಧನರಾಗಿದ್ದಾರೆ.