ಅಂತಾರಾಷ್ಟ್ರೀಯ ಸುದ್ದಿ:
ಇಸ್ಲಾಮಾಬಾದ್: ಕಣಿವೆ ನಾಡಿಗೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿರುವ ವಿಚಾರಕ್ಕೆ, ಪಾಕ್ ತನ್ನ ವಾಗ್ದಾಳಿ ಮುಂದುವರೆಸಿದೆ. ಕೆಲ ಸಚಿವರು ವಿವಾದಾತ್ಮಕ ಹೇಳಿಕೆಯನ್ನ ಕೊಡುತ್ತಲೇ ಬಂದಿದ್ದಾರೆ. ಗಾಯಕಿಯೊಬ್ಬಳು ಮೇಲಿಂದ ಮೇಲೆ ಯಡವಟ್ಟು ಮಾಡ್ತಾನೇ ಇದ್ದಾಳೆ. ಇದೀಗ ಸಚಿವರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
370 ಕಾಯ್ದೆ ರದ್ದು ವಿಚಾರಕ್ಕೆ ಭಾರತಕ್ಕೆ ಬೆಂಬಲ ನೀಡುವ ರಾಷ್ಟ್ರಗಳೆಲ್ಲ ನಮ್ಮ ವೈರಿಗಳು ಎಂದು ಗಿಲ್ಗಿಟ್-ಬಾಲ್ಟಿಸ್ತಾನದ ವ್ಯವಹಾರಗಳ ಸಚಿವ ಅಲಿ ಅಮಾನ್ ಗಂಡಾಪುರ್ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸಚಿವರು, ಕಾಶ್ಮೀರದಲ್ಲಿ ಭಾರತ ಹಾಗೂ ಪಾಕ್ ನಡುವೆ ಉದ್ವಿಗ್ನತೆ ಹೆಚ್ಚಾದ್ರೆ ಖಂಡಿತವಾಗಿ ನಾವು ಯುದ್ಧ ಮಾಡುತ್ತೇವೆ. ಭಾರತಕ್ಕೆ ಬೆಂಬಲ ನೀಡುವ ಎಲ್ಲ ರಾಷ್ಟ್ರಗಳ ಮೇಲೆ ಕ್ಷಿಪಣಿ ಹಾರಿಸುತ್ತೇವೆ ಎಂದು ಹೇಳಿದ್ದಾರೆ.
ಸಚಿವರ ಈ ವಿವಾದಾತ್ಮಕ ಹೇಳಿಕೆ ವಿಡಿಯೋವನ್ನ ಪಾಕ್ ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದು, ಇದು ಪಾಕ್ ಗೆ ತಿರುಮಂತ್ರವಾಗುವ ಎಲ್ಲ ಲಕ್ಷಣಗಳಿವೆ.