ಪ್ರಜಾಸ್ತ್ರ ಸುದ್ದಿ
ಧಾರವಾಡ: ಮಹಾರಾಷ್ಟ್ರದ ನಾಗ್ಪುರಿನ ಕಾಮ್ಪ್ಟೀನಲ್ಲಿ 45 ದಿನಗಳ ಕಾಲ ನಡೆದ ಆರ್ಮಿ ಎನ್.ಸಿಸಿ ಆಫೀಸರ್ ಟ್ರೈನಿಂಗ್ ಮುಗಿಸಿಕೊಂಡು ಬಂದ ಕರ್ನಾಟಕ ಯುನಿವರ್ಸಿಟಿ ಪಬ್ಲಿಕ್ ಸ್ಕೂಲ್ ಎನ್ ಸಿಸಿ ಸಹಾಯಕ ಅಧಿಕಾರಿ ಶ್ರೀಕಾಂತ್ ಹುಟಗಿ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಶ್ರೀಕಾಂತ್ ಹುಟಗಿ, ಕರ್ನಾಟಕ ಯುನಿವರ್ಸಿಟಿ ಪಬ್ಲಿಕ್ ಸ್ಕೂಲ್, ಶಾಲೆಯ ಮಕ್ಕಳ ಶಿಸ್ತು, ಸಾಹಸ ಮನೋಭಾವ, ಸಮಾಜದ ಸಮಸ್ಯೆಯ ವಿರುದ್ದ ಹೋರಾಟ, ದೇಶ ಸೇವೆಗೆ ಸದಾ ಮುಂದೆ ಇದ್ದಾರೆ ಎಂದರು.
ಕ್ಯಾಡೆಟ್ಸ್ 24 ಎನ್ ಸಿಸಿ ಬಟಾಲಿಯನ್ ನೇಬ್ ಸುಬೇದಾರ್ ದಶರಥ ಸಾಬ್, ಶಿಕ್ಷಣ ಇಲಾಖೆಯ ಶಿಕ್ಷಕರು, ಅಧಿಕಾರಿಗಳು ಶಾಲೆಯ ವಿದ್ಯಾರ್ಥಿಗಳು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಮಹೇಶ ಯೆರಿಮನಿ ಗೌರವಿಸಿದರು.