ಶಾಸಕ ಶ್ರೀನಿವಾಸ್ ಮಾನೆ ಪ್ರಮಾಣ ವಚನ ಸ್ವೀಕರಿಸದೆ ಹೋಗಿದ್ಯಾಕೆ?

286

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇಂದು ವಿಧಾನಸೌಧದ ಸಭಾಂಗಣದಲ್ಲಿ ಹಾನಗಲ್ ಹಾಗೂ ಸಿಂದಗಿಯ ಮತಕ್ಷೇತ್ರದಿಂದ ನೂತನವಾಗಿ ಶಾಸಕರಾಗಿ ಆಯ್ಕೆಯಾದವರ ಪ್ರಮಾಣ ವಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಭಾಪತಿ ವಿಶ್ವವೇಶ್ವರ ಹೆಗಡೆ ಕಾಗೇರಿ ಪ್ರಮಾಣ ವಚನ ಬೋಧಿಸಿದರು. ಬಿಜೆಪಿಯ ರಮೇಶ ಭೂನಸೂರ ಪ್ರಮಾಣ ವಚನದ ವೇಳೆ ಹೊರ ಹೋದ ಶ್ರೀನಿವಾಸ್ ಮಾನೆ ವಾಪಸ್ ಬರ್ಲಿಲ್ಲ.

ಎರಡು ನಿಮಿಷ ಎಂದು ಹೇಳಿ ಹೋದವರು ವಾಪಸ್ ಬಂದಿಲ್ಲ. ಹೀಗಾಗಿ ಸ್ಪೀಕರ್ ಸಭಾಂಗಣದಲ್ಲಿಯೇ ಮಾನೆ ಪ್ರಮಾಣ ವಚನ ಸ್ವೀಕರಿಸಲಿ ಎಂದು ಕಾಗೇರಿ ಹೇಳಿದರು. ಮಾನೆ ಹೊರಗೆ ಹೋದವರು ವಾಪಸ್ ಬರದೆ ಇರೋದಕ್ಕೆ ಕಾರಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬರದೆ ಇರೋದು ಎನ್ನಲಾಗುತ್ತಿದೆ.

ಡಿ.ಕೆ ಶಿವಕುಮಾರ್ ಬಂದ ನಂತರ ಪ್ರಮಾಣ ವಚನ ಸ್ವೀಕರಿಸಲಿದ್ದರು. ಅವರು ಬರದೆ ಇರುವ ಕಾರಣಕ್ಕೆ ಇಂದು ಪ್ರಮಾಣ ವಚನವನ್ನು ಸ್ವೀಕರಿಸದೆ ಹೋದರು ಅನ್ನೋ ಮಾತುಗಳು ಕೇಳಿ ಬರುತ್ತಿದೆ.




Leave a Reply

Your email address will not be published. Required fields are marked *

error: Content is protected !!