ಪ್ರಜಾಸ್ತ್ರ ಸದ್ದಿ
ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಸಂಜೆಯಿಂದ ಮುಂದಿನ 14 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಸರ್ಕಾರ ಲಾಕ್ ಡೌನ್ ಅನ್ನೋ ಪದ ಬಳಸದೆ, ಬಿಗಿ ಕ್ರಮದ ಹೆಸರಿನಲ್ಲಿ 14 ದಿನ ರಾಜ್ಯವನ್ನ ಬಂದ್ ಮಾಡಿದೆ. ಹೀಗಾಗಿ ಸಾರಿಗೆ ಸೇವೆಯೂ ಸಹ ಇರುವುದಿಲ್ಲ.
ಸಾರಿಗೆ ನೌಕರರ ಮುಷ್ಕರದಿಂದ ಎರಡು ವಾರ ಕಾಲ ಅದೆಷ್ಟೋ ಜನರು ಕೆಲಸಕ್ಕೆ ಹೋಗಕ್ಕೆ ಆಗದೆ ಒದ್ದಾಡಿದ್ರು. ಈಗ ಸರ್ಕಾರ ಎರಡು ವಾರ ರಾಜ್ಯವನ್ನ ಬಂದ್ ಮಾಡಿ ಆದೇಶಿಸಿದೆ. ಹೀಗಾಗಿ ಎರಡು ವಾರ ಸಾರಿಗೆ ಸೇವೆ ಸಹ ಇರುವುದಿಲ್ಲ. ಇದ್ರಿಂದಾಗಿ ಪಾಸ್ ಪಡೆದುಕೊಂಡ ಜನರಿಗೆ ಈ ತಿಂಗಳು ಬಹುದೊಡ್ಡ ಹೊರೆಯನ್ನ ಹೊರೆಸಲಾಗಿದೆ.